May 2, 2024

MALNAD TV

HEART OF COFFEE CITY

ವೈದ್ಯರ ನಿರ್ಲಕ್ಷಕ್ಕೆ ಹಸುಗೂಸು ಸಾವು..?

1 min read

ವೈದ್ಯರ ನಿರ್ಲಕ್ಷಕ್ಕೆ ಹಸುಗೂಸು ಸಾವು..?

ಚಿಕ್ಕಮಗಳೂರು : ವೈದ್ಯರ ನಿರ್ಲಕ್ಷಕ್ಕೆ ಹಸುಗೂಸೊಂದು ಮೃತಪಟ್ಟಿದೆ ಎಂದು ಆರೋಪಿಸಿ ಪೋಷಕರು ವೈದ್ಯರ ವಿರುದ್ದ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಮಡೆನೇರಲು ಗ್ರಾಮದ ಹರೀಶ್ ದಂಪತಿಗೆ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಮಗು ಜನಿಸಿದೆ. ಅದರೆ ಮಗು ಮೃತಪಟ್ಟಿದೆ. ಬಳಿಕ ಮಗುವನ್ನು ಅಸ್ಪತ್ರೆ ಸಿಬ್ಬಂದಿ ಪೋಷಕರಿಗೆ ನೀಡಿದ್ದಾರೆ. ಮನೆಗೆ ತೆರಳಿ ಮೃತ ಮಗುವನ್ನು ನೋಡಿದಾಗ ಮಯ ಮೇಲೆ ಚಾಕುವಿನಿಂದ ಕುಯ್ದಿರುವ ಗಾಯ ಕಂಡು ಬಂದಿದೆ. ಇದಕ್ಕೆ ಆಕ್ರೋಶಗೊಂಡ ಪೋಷಕರು ವೈದ್ಯರ ನಿರ್ಲಕ್ಷವೇ ಮಗುವಿನ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. ಅಲ್ಲದೆ ಇಂತಹ ಘಟನೆಗಳು ಇಲ್ಲಿ ನಡೆಯುತ್ತಿರುತ್ತವೆ ಎಂದು ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.


ಬಡವರ ಪಾಲಿಗೆ ಆಶದಾಯಕವಾಗಬೇಕಿದ್ದ ಹೆರಿಗೆ ಆಸ್ಪತ್ರೆ ಮಕ್ಕಳ ಸಾವಿಗೆ ಕಾರಣವಾಗಿದೆ ಎಂದು ಆರೋಪ ಕೇಳಿ ಬಂದಿದೆ. ಇಂತಹದ್ದೆ ಮೂರು ಮಕ್ಕಳು ಮೃತಪಟ್ಟಿದೆ ಎಂದು ಅರೋಪಿಸಿದ್ದು, ಹರೀಶ್ ದಂಪತಿ ಹಾಗೂ ಕುಟುಂಬಸ್ಥರು ಕಣ್ಣಿರಿಟ್ಟಿದ್ದಾರೆ.
ಆಸ್ಪತ್ರೆ ಎದುರು ಪೋಷಕರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ವೈದ್ಯಾಧಿಕಾರಿ ಹಾಗೂ ಪೊಲೀಸರು ನೊಂದ ಕುಟುಂಬಸ್ಥರನ್ನ ಸಮಾಧಾನ ಪಡಿಸುವ ಪ್ರಯತ್ನ ನಡೆಸಿದರು. ವೈದ್ಯರ ನಿರ್ಲಕ್ಷವೇ ಮಗುವಿನ ಸಾವಿಗೆ ಕಾರಣ ಎಂದು ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ಜಿಲ್ಲಾ ಆಸ್ಪತ್ರೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!