ದಿಢೀರ್ ಬೆಂಕಿ.. ಮಹಿಳೆಯರ ದಿಟ್ಟತನದಿಂದ ಉಳಿದ ಎರಡು ಜೀವಗಳು..!
1 min readಚಿಕ್ಕಮಗಳೂರು : ಆಕಸ್ಮಿಕವಾಗಿ 3 ಮನೆಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿ ಹೊತ್ತಿ ಉರಿಯುವಾಗಲೇ ಮಹಿಳೆಯರು ಒಳ ಹೋಗಿ ಇಬ್ಬರನ್ನ ರಕ್ಷಿಸಿರುವ ಘಟನೆ ಕಡೂರು ತಾಲೂಕು ಗುಮ್ಮನಹಳ್ಳಿ ಸಮೀಪದ ಭೋವಿ ಕಾಲೋನಿಯಲ್ಲಿ ನಡೆದಿದೆ.
ಮನೆ ಹೊತ್ತಿ ಉರಿಯುವಾಗ ಹೆಣ್ಣು ಮಕ್ಕಳು ಒಳ ಹೋಗಿ ಮನೆಯಲಿದ್ದ ಇಬ್ಬರ ಜೀವ ಉಳಿಸಿ, ಇಬ್ಬರನ್ನ ರಕ್ಷಿಸಿದ್ದಾರೆ. ಊರಿನ ಗಂಡಸರೆಲ್ಲಾ ಗ್ರಾಮದಲ್ಲಿ ಸಾವನ್ನಪ್ಪಿದ್ದವರ ಅಂತ್ಯ ಸಂಸ್ಕಾರಕ್ಕೆ ಹೋಗಿದ್ದರು ಆ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಶಶಿ, ಕಲ್ಲೇಶ್, ಹನುಮಂತ ಎಂಬುವರಿಗೆ ಸೇರಿದ್ದ ಮನೆಯ ಮೇಲೆ ಬೆಂಕಿ ಬಿದ್ದಿದೆ. ಈ ವೇಳೆ ಮನೆಗೆ ಬೆಂಕಿ ಬಿದ್ದಾಗ ಕಲ್ಲೇಶ್ ಮನೆಯಲ್ಲಿ 6 ವರ್ಷದ ಮಗು ಮಲಗಿತ್ತು ಮತ್ತು ಹನುಮಂತ ಎಂಬುವರು ಮದ್ಯ ಸೇವಿಸಿ ಮನೆಯಲ್ಲಿ ಮಲಗಿದ್ದರು ಇವರಿಬ್ಬರನ್ನು ಮಹಿಳೆಯರು ರಕ್ಷಿಸಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಅಂತ್ಯ ಸಂಸ್ಕಾರವನ್ನ ಅರ್ಧಕ್ಕೆ ಬಿಟ್ಟು ಹಳ್ಳಿಗರು ಬಂದಿದ್ದಾರೆ. ಊರಲ್ಲಿ ಗಂಡಸರಿಲ್ಲ, ಮನೆಗಳಿಗೆ ಬೆಂಕಿ ಬಿದ್ದಿದೆ ಎಂದು ಮಹಿಳೆಯರೇ ಒಳಹೋಗಿ ಎರಡು ಜೀವಗಳನ್ನು ರಕ್ಷಣೆ ಮಾಡಿರುವುದು ನಿಜಕ್ಕೂ ಹೆಮ್ಮೆ ಪಡುವ ಸಂಗತಿಯಾಗಿದೆ.
ಬೆಂಕಿ ಬಿದ್ದ ಪರಿಣಾಮ ಶಶಿ, ಕಲ್ಲೇಶ್ ಮನೆ ಸಂಪೂರ್ಣ ಹಾನಿಯಾಗಿದ್ದು, ಹನುಮಂತನ ಮನೆ ಭಾಗಶಃ ಹಾನಿಯಾಗಿದೆ. ಎಲ್ಲರೂ ಕೂಲಿ ಮಾಡಿಕೊಂಡು ಗುಡಿಸಲಲ್ಲಿ ವಾಸವಿದ್ದವರು. ಆದ್ದರಿಂದ ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g