April 27, 2024

MALNAD TV

HEART OF COFFEE CITY

‘ಅಯೋಧ್ಯ ಬಲಿದಾನ ದಿವಸ್’ ಅಂಗವಾಗಿ ರಕ್ತದಾನ ಶಿಬಿರ

1 min read

ಚಿಕ್ಕಮಗಳೂರು: ಅಯೋಧ್ಯ ರಾಮಮಂದಿರಕ್ಕಾಗಿ ಪ್ರಾಣಾರ್ಪಣೆ ಮಾಡಿದ ಬಜರಂಗದಳದ ರಾಮ್ ಕೊಠಾರಿ, ಶರದ್ ಕೊಠಾರಿ ಇವರ ನೆನಪಿಗಾಗಿ ದೇಶಾದ್ಯಂತ ಪ್ರತಿ ವರ್ಷ ವಿಶ್ವ ಹಿಂದೂ ಪರಿಷದ್ ಬಜರಂಗದಳ ರಕ್ತದಾನ ಮಾಡುತ್ತ ಬರುತ್ತಿದೆ ಹಾಗೆಯೇ ಇಂದು ಕೂಡ ಚಿಕ್ಕಮಗಳೂರಿನಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಯಕರ್ತರು ರಕ್ತದಾನ ಮಾಡಿದರು.

ಮಲ್ಲೇನಗೌಡ ಜಿಲ್ಲಾ ಆಸ್ಪತ್ರೆಯಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಚಿಕ್ಕಮಗಳೂರು ನಗರ ಪ್ರಕಂಡದ ವತಿಯಿಂದ ಅಯೋಧ್ಯ ಬಲಿದಾನ್ ದಿವಸ್ ಅಂಗವಾಗಿ ರಕ್ತದಾನ ಮಹಾದಾನ ಎಂಬ ಶೀರ್ಷಿಕೆಯಡಿಯಲ್ಲಿ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಿದ್ದರು.

ಬಜರಂಗದಳ ಜಿಲ್ಲಾ ಸಹ ಸಂಯೋಜಕ ಶ್ಯಾಂವಿ ಗೌಡ ಮಾತನಾಡಿ, ವರ್ಷವಿಡಿ ತುರ್ತು ರಕ್ತದ ಅವಶ್ಯಕತೆ ಇದ್ದಾಗ ಬಜರಂಗದಳದ ಕಾರ್ಯಕರ್ತರು ರಕ್ತದಾನ ಮಾಡುತ್ತಾ ಬರುತ್ತಿದ್ದಾರೆ ರಕ್ತದಾನ ಒಂದು ಶ್ರೇಷ್ಠವಾದ ಮಹಾದಾನ ರಕ್ತದ ಅವಶ್ಯಕತೆ ಇದ್ದಾಗ ಬಜರಂಗದಳ ಕಾರ್ಯಕರ್ತರನ್ನು ಸಂಪರ್ಕಿಸಿ ಎಂದು ತಿಳಿಸಿದರು.

ಅಯೋಧ್ಯ ರಾಮಮಂದಿರಕ್ಕಾಗಿ ಪ್ರಾಣಾರ್ಪಣೆ ಮಾಡಿದ ಬಜರಂಗದಳದ ರಾಮ್ ಕೊಠಾರಿ ಶರದ್ ಕೊಠಾರಿ ಇವರ ನೆನಪಿಗಾಗಿ ದೇಶಾದ್ಯಂತ ಪ್ರತಿ ವರ್ಷ ವಿಶ್ವ ಹಿಂದೂ ಪರಿಷದ್ ಬಜರಂಗದಳ ರಕ್ತದಾನ ಮಾಡುತ್ತ ಬರುತ್ತಿದೆ ಹಾಗೆಯೇ ವಿಶ್ವ ಹಿಂದೂ ಪರಿಷದ್ ಬಜರಂಗದಳದ ಕರಸೇವೆಗಾಗಿ ರಾಮ್ ಕೊಠಾರಿ ಶರದ್ ಕೊಠಾರಿ 1990 ಅಕ್ಟೋಬರ್ 30ರಂದು 200 ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ತೆರಳಿ ಅಯೋಧ್ಯೆಯನ್ನು ತಲುಪುತ್ತಾರೆ. ಕಳಂಕಿತ ಕಟ್ಟಡದ ಮೇಲೆ ಪ್ರಪ್ರಥಮವಾಗಿ ರಾಮ್ ಕೊಠಾರಿ ಭಗವದ್ವಜವನ್ನು ಹಾರಿಸುತ್ತಾರೆ ನಂತರ ಮುಲಾಯಂ ಸಿಂಗ್ ಯಾದವ್ ಸರ್ಕಾರ ಗುಂಡಿನ ದಾಳಿ ನಡೆಸಿದ ಪರಿಣಾಮವಾಗಿ ಏಕಕಾಲಕ್ಕೆ ಒಂದೇ ಮನೆಯ ಇಬ್ಬರು ಸಹೋದರರು ಪ್ರಭುವಿನ ಮಂದಿರಕ್ಕಾಗಿ ಪ್ರಾಣಾರ್ಪಣೆ ಮಾಡುತ್ತಾರೆ ಅವರ ಸ್ಮರಿಸಿ ಈ ರಕ್ತದಾನ ಶಿಬಿರವನ್ನು ಮಾಡುತ್ತಿದ್ದೇವೆ ಎಂದರು. 

ವಿಶ್ವ ಹಿಂದೂ ಪರಿಷತ್ ಬಜರಂಗದಳ ಚಿಕ್ಕಮಂಗಳೂರು ನಗರ ಪ್ರಖಂಡ ವತಿಯಿಂದ ನಡೆದ ರಕ್ತದಾನ ಶಿಬಿರದಲ್ಲಿ ಅರಳಗುಪ್ಪೆ ಮಲ್ಲೇಗೌಡ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಬಜರಂಗದಳ ಕಾರ್ಯಕರ್ತರು ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಅಧ್ಯಕ್ಷ ಶ್ರೀಕಾಂತ್ ಪೈ, ವಿಶ್ವ ಹಿಂದೂ ಪರಿಷದ್ ಕಾರ್ಯದರ್ಶಿ ರಂಗನಾಥ್, ವಿಶ್ವ ಹಿಂದೂ ಪರಿಷದ್ ಮಠ ಮಂದಿರ ಪ್ರಮುಖ ಆಟೋ ಶಿವಣ್ಣ, ವಿಶ್ವ ಹಿಂದೂ ಜಿಲ್ಲಾ ಸಹ ಕಾರ್ಯದರ್ಶಿ ಅಮಿತ್ ಗೌಡ , ಬಜರಂಗದಳ ಜಿಲ್ಲಾ ವಿದ್ಯಾರ್ಥಿ ಪ್ರಮುಖ ಗುರು, ನಗರ ಅಧ್ಯಕ್ಷ ದಿಲೀಪ್ ಶೆಟ್ಟಿ, ನಗರ ಕಾರ್ಯದರ್ಶಿ ಕೃಷ್ಣ, ನಗರ ಸಂಯೋಜಕ ಸುನಿಲ್, ಸಹ ಸಂಯೋಜಕ ಮಂಜು, ಕೋಟೆ ಶಾಮ್ ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!