ಆರೋಪ ಸಾಭೀತಾದ ಅಧಿಕಾರಿಗಳಿಂದ ಸಾಕ್ಷಿ ನಾಶ ಕಾಂಗ್ರೆಸ್ ಆರೋಪ
ಚಿಕ್ಕಮಗಳೂರು : ಕಡೂರು ತಾಲೂಕು ಕಛೇರಿಯ ಭೂಮಿ ಕೇಂದ್ರದಲ್ಲಿ ಅಕ್ರಮ ಮಂಜುರಾತಿ ಪ್ರಕರಣದಲ್ಲಿ ತಹಶೀಲ್ದಾರ್ ಉಮೇಶ್ ಪಾತ್ರ ತನೀಖ ವರದಿಯಲ್ಲಿ ಸಾಬೀತಾದರು ಅವರನ್ನು ಅಮಾನತ್ತುಗೂಳಿಸದೆ ಇರುವುದಕ್ಕೆ ಎಐಸಿಸಿ ಕಾರ್ಯದರ್ಶಿ ಬಿ.ಎಂ ಸಂದೀಪ್ ಆರೋಪಿಸಿದ್ದಾರೆ.
ಪತ್ರೀಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಹಗರಣ ಬೃಹತ್ ಆಗಿದ್ದು ಇದರಲ್ಲಿ ಕೇವಲ ಮೀನುಗಳನ್ನು ಹಿಡಿದಿದ್ದು ತಿಮಿಂಗಿಲವನ್ನು ಹಾಗೆ ಬಿಟ್ಟಿದ್ದಾರೆ. ಕಡೂರು ತಹಶೀಲ್ದಾರ್. ಉಮೇಶ್ ಪ್ರಕರಣದ ಸಾಕ್ಷಿ ನಾಶ ಮಾಡುತ್ತಿದ್ದಾರೆ. ಕೂಡಲೇ ಅವರ ವಿರುದ್ಧ ಕೇಸು ದಾಖಲಿಸಬೇಕು ಎಂದು ಸಂದೀಪ್ ಒತ್ತಾಯಿಸಿದರು.. ತಪ್ಪಿದಲ್ಲಿ ಕಾಂಗ್ರೆಸ್ ಪಕ್ಷದಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಕಡೂರು ಪುರಸಭೆ ಮುಖ್ಯಧಿಕಾರಿ ಸಹಾ ಅಧಿಕಾರ ದುರುಪಯೋಗ ಪಡಿಸಿಕೊಂಡು ಅಕ್ರಮವಾಗಿ ತನ್ನ ಮಗಳಿಗೆ ೩ ಎಕರೆ ಸ್ಕೆಚ್ ಮಾಡಿರುವುದಕ್ಕೆ ಸಾಕ್ಷಿ ಸಿಕ್ಕಿದೆ. ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆನಂದ್ ಆರೋಪಿಸಿದ್ದಾರೆ. ಮುಖ್ಯಾಧಿಕಾರಿ ಮಂಜುನಾಥ್ ಸಾಕ್ಷಿ ನಾಶ ಮಾಡುತ್ತಿದ್ದು, ಪುರಸಭೆ ಹಣವನ್ನು ಅದಕ್ಕೆ ಬಳಸಿದ್ದಾರೆ. ಇದರ ಆರೋಪ ಸಾಭೀತಾದರು ಇನ್ನೂ ಏಕೆ ಕ್ರಮ ಇಲ್ಲ ಎಂದು ಆನಂದ್ ಪ್ರಶ್ನಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g