ಹಕ್ಕು ಪತ್ರ ವಿತರಣೆಯಲ್ಲಿ ಲೋಪ, ಮೂವರು ಸಸ್ಪೆಂಡ್
1 min read
ಚಿಕ್ಕಮಗಳೂರು: ಹಕ್ಕು ಪತ್ರ ವಿತರಣೆಯಲ್ಲಿ ಲೋಪವಾದ ಹಿನ್ನಲೆ ಶೃಂಗೇರಿ ತಾಲೂಕಿನಲ್ಲಿ ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಿಗರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶಿವಕುಮಾರ್, ಸಂದೀಪ್ ಹಾಗೂ ಕಂದಾಯ ನಿರೀಕ್ಷಕ ಸತೀಶ್ ಅವರನ್ನು ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಅಮಾನತ್ತುಗೊಳಿಸಿ ಆದೇಶ ನೀಡಿದ್ದಾರೆ.
ಇತ್ತೀಚೆಗೆ ಹಕ್ಕುಪತ್ರ ವಿತರಣೆಗೆ ಲಂಚ ಪಡೆದ ಸಲುವಾಗಿ ತಹಸೀಲ್ದಾರ್ ಅಂಬುಜ ಹಾಗೂ ಗ್ರಾಮ ಲೆಕ್ಕಿಗ ಸಿದ್ದಪ್ಪ ಎಸಿಬಿ ಬಲೆಗೆ ಬಿದಿದ್ದರು. ಇದಾದ ನಂತರ ಉಪ ವಿಭಾಗಾಧಿಕಾರಿ ಶೃಂಗೇರಿ ತಾಲೂಕು ಕಛೇರಿ ಹಕ್ಕುಪತ್ರ ವಿತರಣೆಯ ಲೋಪದ ಬಗ್ಗೆ ಪರಿಶೀಲನೆಗೆ ಬಂದಾಗ ಅಮಾನತುಗೊಂಡ ಮೂವರ ಸಿಬ್ಬಂದಿಗಳು ಹಾಜರಾಗಿರಲಿಲ್ಲ. ನಂತರದಲ್ಲಿ ಶೋಕಾಸ್ ನೋಟಿಸ್ ಕೂಡ ಈ ಮೂವರಿಗೆ ನೀಡಲಾಗಿತ್ತು. ಅದಕ್ಕೂ ಉತ್ತರ ನೀಡದ ಹಿನ್ನೆಲೆ ಅಮಾನತ್ತುಗೊಳಿಸಲಾಗಿದೆ.
ನಂತರದ ಹಕ್ಕುಪತ್ರ ವಿತರಣೆಯಲ್ಲಿ ಲೋಪವಾಗಿದೆ ಎಂದು ಉಪ ವಿಭಾಗಾಧಿಕಾರಿ ಡಾ.ಹೆಚ್.ಎನ್ ನಾಗರಾಜ್ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಈ ಲೋಪದ ಬಗ್ಗೆ ವಿಚಾರಣೆ ಮುಗಿಯುವ ತನಕ ಸಂದೀಪ್, ಸತೀಶ್ ಹಾಗೂ ಶಿವಕುಮಾರ್ ಅವರನ್ನು ಅಮಾನತ್ತು ಮಾಡಿ ಆದೇಶಿಸಲಾಗಿ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g