ಮಾಹಿತಿ ಹಕ್ಕಿನಡಿ ಉಚಿತವಾಗಿ ಮಾಹಿತಿ ನೀಡುವಂತೆ ಒತ್ತಾಯ
1 min readಚಿಕ್ಕಮಗಳೂರು : ಮಾಹಿತಿ ಹಕ್ಕಿನ ಅಧಿನಿಯಮದಂತೆ ನಾನು ಕೇಳಿರುವ ಎಲ್ಲಾ ಮಾಹಿತಿಯನ್ನು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಜಿ. ಪ್ರಭು ಉಚಿತವಾಗಿ ನೀಡಬೇಕೆಂದು ಮಾಹಿತಿ ಹಕ್ಕು ಕಾರ್ಯಕರ್ತರಾದ ಸುಂದರ್ ಬಂಗೇರಾ ಆಗ್ರಹಿಸಿದರು.
ಈ ಬಗ್ಗೆ ಮಾತನಾಡಿದ ಅವರು ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಆಗಿರುವ ಖರ್ಚು ವೆಚ್ಚಗಳ ಬಗ್ಗೆ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದು, ಒಟ್ಟು ದಾಖಲೆಗಳು 4328 ಪುಟಗಳಿದ್ದು, ಅಷ್ಟು ಮಾಹಿತಿಯನ್ನು ಪಡೆಯಲು 8656 ರೂಪಾಯಿಗಳನ್ನು ಡಿ.ಡಿ ಕಟ್ಟಿ ಮಾಹಿತಿ ಪಡೆಯುವಂತೆ ತಿಳಿಸಿರುತ್ತಾರೆ. ಆದರೆ ಮಾಹಿತಿ ಹಕ್ಕಿನಡಿ ಕೇವಲ ದಾಕಲೆಗಳ ನಕಲನ್ನು ಮಾತ್ರ ಪಡೆದುಕೊಳ್ಳದೆ, ಸಿ.ಡಿ, ಪೆನ್ನುಡ್ರೈವ ಸೇರಿದಂತೆ ನಮಗೆ ಅನುಕೂಲವಾದ ರೀತಿಯಲ್ಲಿ ಮಾಹಿತಿಯನ್ನು ಪಡೆದುಕೊಳ್ಳುತ್ತೇವೆ. ಮಾಹಿತಿ ನೀಡಲು ಜಿಲ್ಲಾಧ್ಯಕ್ಷರು ಬದ್ದರಾಗಿರಬೇಕು. ನಾನು ಕೇಳಿದ ಮಾಹಿತಿಯನ್ನು ನೀಡುವಲ್ಲಿ ಮಾಹಿತಿ ಹಕ್ಕಿನ ಅಧಿನಿಯಮದ ಕಾಲ ಮಿತಿಯನ್ನು ಮೀರಿರುವುದರಿಂದ ನಾನು ಕೇಳಿರುವ ಎಲ್ಲಾ ಮಾಹಿತಿಯನ್ನು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಜಿ. ಪ್ರಭು ಉಚಿತವಾಗಿ ನೀಡಬೇಕೆಂದು ಒತ್ತಾಯಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g