May 2, 2024

MALNAD TV

HEART OF COFFEE CITY

ಪೆಂಕಾಕ ಸಿಲತ್ ಮಾರ್ಷಲ್ ಆಟ್ರ್ಸನಲ್ಲಿ ಕಾಫಿನಾಡಿಗೆ ಹಲವು ಬಹುಮಾನ

1 min read

 

ಚಿಕ್ಕಮಗಳೂರು: ಹರಿಯಾಣ ರಾಜ್ಯದ ರೋತಕ್ ದಯಾನಂದ ಸರಸ್ವತಿ ವಿಶ್ವವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಪೆಂಕಾಕ ಸಿಲತ್ ಮಾರ್ಷಲ್ ಆಟ್ರ್ಸ ಸ್ಪರ್ಧೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ವಿದ್ಯಾರ್ಥಿಗಳು 3 ಚಿನ್ನ, 2 ಬೆಳ್ಳಿ, 4 ಕಂಚು. ಪದಕಗಳನ್ನು ಪಡೆದು ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದು ಸ್ಥಳೀಯರು ಮಕ್ಕಳನ್ನು ಅದ್ಧೂರಿಯಿಂದ ಸ್ವಾಗತಿಸಿದ್ದಾರೆ.

 

ಚಿಕ್ಕಮಗಳೂರು ಪೆಂಕಾಕ್ ಸಿಲತ್ ಅಸೋಸಿಯೇಶನ್‍ನ ವಿದ್ಯಾರ್ಥಿಗಳಾದ ಮನೋಜ್, ಅಮಾನ್ ಶ್ರೀವತ್ಸ, ನಿಷಲ್ ಡಿಸೋಜಾ ಬಂಗಾರದ ಪದಕ ಗೆದ್ದುಕೊಂಡ್ರೆ, ರಿಯಾನ್ ಲಿವಿಸ್, ನಿಹಾಲ್ ಬೆಳ್ಳಿ ಪದಕವನ್ನು ಪಡೆದಿದ್ದಾರೆ. ಇನ್ನು ಕುಶಾಲ್ ಡಿ.ಪಿ, ಶೋಭಾ ಡಿ.ಎಸ್, ವೆನಿಶಾ ವಿ ಗೌಡ, ಜ್ಞಾನ್‍ದೀಪ್ ಕಂಚಿನ ಪದಕ ಪಡೆದುಕೊಳ್ಳುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

 

ಇನ್ನು ಗುರುವಾರ ಸಂಜೆ ನಗರಕ್ಕೆ ಬಂದ ಸ್ಪರ್ಧಾಳುಗಳನ್ನು ದಂಟರಮಕ್ಕಿ ಗ್ರಾಮಸ್ಥರು, ಕ್ರೀಡಾಭಿಮಾನಿಗಳು, ಪೋಷಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಅಭೂತಪೂರ್ವವಾದ ಸ್ವಾಗತವನ್ನು ನೀಡಿ, ಪಟಾಕಿ ಸಿಡಿಸಿ ಹೂವಿನ ಹಾರವನ್ನು ಹಾಕಿ ದಂಟರಮಕ್ಕಿ ಗ್ರಾಮದಲ್ಲಿತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಹರ್ಷವ್ಯಕ್ತಪಡಿಸಿ ಕ್ರೀಡಾಪಟುಗಳನ್ನು ಅಭಿನಂದಿಸಿದ್ದಾರೆ. ಇನ್ನು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಸಂಸ್ಥೆಯ ತರಬೇತುದಾರ ಯಶ್ವಂತ್, ಮುಖ್ಯ ತರಬೇತುದಾರ ಗಿರೀಶ್ ಟಿ.ಎಸ್ ಅವರಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!