ಶಾಸಕರ ಆಣತಿಯಂತೆ ಪೌರಾಯುಕ್ತರ ಕೆಲಸ : ಎಸ್.ಡಿ.ಪಿ.ಐ
1 min readಚಿಕ್ಕಮಗಳೂರು: ನಗರಸಭೆ ಆಯುಕ್ತರು ಸರ್ಕಾರದ ಆಜ್ಞೆ ಪಾಲಿಸದೆ ಸಿ.ಟಿ.ರವಿಯವರ ಅಣತಿಯಂತೆ ಕೆಲಸ ಮಾಡುತ್ತಿದ್ದು ಅವರ ಆಜ್ಞಾಪಾಲಕ ಆಗಿದ್ದಾರೆ. ಎಂದು ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್.ಬಾಸ್ಕರ್ ಪ್ರಸಾದ್ ಆರೋಪಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿರಾ ನಗರದಲ್ಲಿ 16-17 ವರ್ಷಗಳಿಂದ ವಾಸ ಮಾಡುತ್ತಿರುವ ಬಡ ಕೂಲಿಕಾರ್ಮಿಕರ ಮನೆಗಳನ್ನು ತೆರವು ಗೊಳಿಸಿದ್ದಾರೆ. ಅವರ ಬಳಿ ನಗರಸಭೆಯಿಂದ ನೀಡಿರುವ ನಿರಪೇಕ್ಷಣಾ ಪತ್ರ, ಕಂದಾಯ ಕಟ್ಟಿರುವ ದಾಖಲೆಗಳು, ವಿದ್ಯುತ್ ಸಂಪರ್ಕಕಕ್ಕೆ ನೀಡಿರುವ ನಿರಪೇಕ್ಷಣಾ ಪತ್ರಗಳು ಇವೆ. ಆದರೂ ಕೂಡಾ ಅವರ ಮನೆಗಳನ್ನು ತೆರವು ಮಾಡಿದ್ದಾರೆಂದು ಆರೋಪಿಸಿದರು.
ಏಕಾಏಕಿ ಕಟ್ಟಡ ತೆರವುಗೊಳಿಸುತ್ತಿರುವುದನ್ನು ಡಿಸಿಎಸ್ಡಿಪಿಐ ಖಂಡಿಸುತ್ತದೆ. ಜಿಲ್ಲಾಧಿ ಕಾರಿಗಳು ಇತ್ತ ಗಮನ ಹರಿಸಿ ತಾವೇ ಒಂದು ನಿಲುವನ್ನು ತೆಗೆದುಕೊಳ್ಳಬೇಕು. ನಗರಸಭೆ ಯಲ್ಲಿ ಈ ಕಟ್ಟಡ ತೆರವು ಕಾರ್ಯದಲ್ಲಿ ಪಾಲ್ಗೊಂಡವರ ಮೇಲೆ ಕ್ರಮ ಜರುಗಿಸಿ ಅಮಾನತು ಮಾಡಬೆಕೆಂದು ಒತ್ತಾಯಿಸಿದರು.
ದಾಖಲೆಗಳನ್ನು ಪರಿಶೀಲನೆ ನಡೆಸದೆ ಈ ರೀತಿ ಏಕಾಏಕಿ ಬಂದು ದರ್ಪ, ದಬ್ಬಾಳಿಕೆ ನಡೆಸುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು. ನಗರಸಭೆ ಅಧ್ಯಕ್ಷರು ಉತ್ತರ ಪ್ರದೆಶ ಮುಖ್ಯಮಂತ್ರಿ ತನ್ನ ಮೈಮೇಲೆ ಬಂದವನಂತೆ ಆಡುತ್ತಿದ್ದಾರೆ. ಇದಕ್ಕೆ ಜಿಲ್ಲಾಧಿಕಾರಿಗಳು ಮದ್ಯ ಪ್ರವೇಶಿಸಿ ಕಡಿವಾಣ ಹಾಕಬೇಕು ಎಂದರು.
ಎಸ್ಡಿಪಿಐ ಜಿಲ್ಲಾಧ್ಯಕ್ಷ ಮುನೀರ್ ಮಾತನಾಡಿ ಜನರ ಕಷ್ಟಗಳಿಗೆ ಸ್ಪಂಧಿಸಬೇಕಾದವರೇ ಜನರ ಹಿತದ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ ಎಂದು ಅಸಮಾದಾನ ವ್ಯಕ್ತಪಡಿಸಿದರು. ನಗರದಲ್ಲಿ ವಿರೋಧ ಪಕ್ಷಗಳು ನಿದ್ದೆ ಮಾತ್ರೆ ತಿಂದು ಮಲಗಿವೆ ಎಂದು ಕುಟುಕಿದರು. ಸಂತ್ರಸ್ಥರಿಗೆ ಸೂಕ್ತ ಪರಿಹಾರ ನೀಡದಿದ್ದರೆ ಎಸ್ಡಿಪಿಐ ಉಗ್ರ ಹೋರಾಟ ನಡೆಸುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಈ ಸಂದರ್ಭದಲ್ಲಿ ಎಸ್ಡಿಪಿಐ ಜಿಲ್ಲಾಧ್ಯಕ್ಷ ಗೌಸ್ ಮುನೀರ್, ಶ್ರೀನಿವಾಸ್ ದಂಟರಮಕ್ಕಿ, ನಗರಸಭೆ ಸದಸ್ಯೆ ಮಂಜುಳಾ, ಶ್ರೀನಿವಾಸ್, ಇದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g