ವರುಣನ ಆಗಮನಕ್ಕೆ ಚಾರ್ಮುಡಿ ಘಾಟಿಯಲ್ಲಿ ಮೈದುಂಬಿದ ಸೌಂದರ್ಯ
1 min readಚಿಕ್ಕಮಗಳೂರು : ಮಲೆನಾಡಲ್ಲಿ ವರುಣನ ಆಗಮನದಿಂದ ಜಿಲ್ಲೆಯ ಪರ್ವತ ಶ್ರೇಣಿಗಳಲ್ಲಿ ಜಲಪಾತಗಳಿಗೆ ಜೀವಕಳೆ ಮೂಡಿದೆ. ಪ್ರಕೃತಿಯ ಸೌಂದರ್ಯಕ್ಕೆ ಪ್ರವಾಸಿಗರು ಫಿಧಾ ಆಗಿದ್ದಾರೆ.
ಮೂಡಿಗೆರೆ ತಾಲೂಕಿನ ಸಹ್ಯಾದ್ರಿ ಶ್ರೇಣಿಗಳಲ್ಲಿ ವರುಣಮ ಆಗಮನದಿಂದ ಚಾರ್ಮಾಡಿ ಘಾಟಿಯಲ್ಲಿ ಪ್ರಕೃತಿ ಸೌಂದರ್ಯ ಕಳೆಗಟ್ಟಿದೆ. ಚಾರ್ಮುಡಿ ಘಾಟಿಯ ದಾರಿಯುದ್ದಕ್ಕೂ ಸಣ್ಣ ಪುಟ್ಟ ಜಲಪಾತಗಳಿಂದ ಆರಂಭವಾಗಿ 100 ಅಡಿಗೂ ಎತ್ತರದಿಂದ ದುಮ್ಮಿಕ್ಕಿ ಹರಿಯುತ್ತಿರುವ ಜಲಪಾತಗಳು ನೋಡುಗರ ಮನ ಸೂರೆಗೊಳ್ಳುತ್ತಿವೆ. ಚಾರ್ಮುಡಿ ಘಾಟಿಯಲ್ಲಿನ ಚುಮುಚುಮು ಚಳಿ, ಮಂಜಿನ ಕಚಗುಳಿ ಹಾಗೂ ಮೈದುಂಬಿ ಹರಿಯತ್ತಿರುವ ಜಲಪಾತಗಳಿಂದ ಚಾರ್ಮುಡಿಯ ಸೌಂದರ್ಯ ಹಿಮ್ಮಡಿಗೊಂಡರೆ, ಪ್ರವಾಸಿಗರಿಗಂತು ಸ್ವರ್ಗವೇ ಧರೆಗಿಳಿದಂತಾಗಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g