ಎಲ್ಲಾ ರೀತಿಯ ತುರ್ತು ಅಗತ್ಯಗಳಿಗೆ 112 ಗೆ ಕರೆ ಮಾಡಿ ಸಹಾಯ ಪಡೆಯಿರಿ
1 min readಚಿಕ್ಕಮಗಳೂರು : ಜನ ಸಾಮಾನ್ಯರಿಗೆ ಬಂದೊದಗುವ ಅಪಾಯದ ತುರ್ತು ಸಂದರ್ಭಗಳಲ್ಲಿ ಕರೆ ಮಾಡಿ ಸಹಾಯ ಪಡೆಯಲು ಹಲವು ನಂಬರ್ಗಳಿದ್ದವು. ಆದರೆ ಇದುವರೆಗೂ ಇದ್ದ ಹಲವು ನಂಬರ್ಗಳ ಬದಲೂ ಒಂದೇ ಕರೆ ನಿಮ್ಮ ಎಲ್ಲಾ ತುರ್ತು ಸೇವೆಗಳಿಗೆ ಸ್ಫಂಧಿಸುವಂತೆ ಕೇಂದ್ರ ಸರ್ಕಾರ ಸಹಾಯವಾಣಿಯನ್ನು ತೆರೆದಿದೆ. ತುರ್ತು ಸಂದರ್ಭದಲ್ಲಿ ಪೊಲೀಸರಿಗೆ, ಅಗ್ನಿ ಅವಘಡಗಳಿಗೆ, ವಿಪತ್ತಿಗೆ ಹಾಗೂ ಇತರೆ ಸೇವೆಗಳಿಗೆ ಕರೆ ಮಾಡಲು ಇದರುವರೆಗೂ ಬೇರೆ ಬೇರೆ ತುರ್ತು ಅಗತ್ಯ ಸೇವಾ ಸಂಖ್ಯೆಗಳಿದ್ದವು. ಆದರೆ ಕೇಂದ್ರ ಸರ್ಕಾರ ದೇಶಾದ್ಯಂತ ಒಂದೇ ತುರ್ತು ಕರೆ ಸೇವೆಯನ್ನು ಜಾರಿಗೊಳಿಸಿದೆ. ನಿಮ್ಮ ಮೊಬೈಲ್ನಿಂದ ತುರ್ತು ಕರೆ ಸಂಖ್ಯೆ 112 ಕ್ಕೆ ಕರೆ ಅಥವಾ ಎಸ್.ಎಂ.ಎಸ್. ಮೂಲಕ ಸಹಾಯ ಪಡೆಯಬಹುದಾಗಿದೆ. 15 ಸೆಕೆಂಡ್ಗಳಲ್ಲಿ ಕರೆ ಸ್ವೀಕಾರಗೊಳ್ಳುವುದಲ್ಲೆ, ಡಿಜಿಟಲ್ ನಕ್ಷೆಯ ಮೂಲಕ ತುರ್ತು ಸ್ಪಂಧನೆ ನೀಡಲಾಗುದು. ವಾರದ 24 ಗಂಟೆಯೂ ಸೇವೆ ನೀಡಲಿದೆ. ಇದರಿಂದ ಅಪರಾದಗಳನ್ನು ಕಡಿಮೆ ಮಾಡಲು ಅಪರಾದ ವಿಶ್ಲೇಷಣೆ ಮಾಡಲು ಮತ್ತು ಮುನ್ಸೂಚನೆ ಅರಿತು ಸಹಾಯ ಮಾಡಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೊಸದಾಗಿ ಬಂದಿರುವ ನಿಮ್ಮ ಮಿತ್ರ 24*7 – 16 ವಾಹನಗಳಿಗೆ ನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಹೆಚ್ ಅಕ್ಷಯ್ ರವರು ಚಾಲನೆ ನೀಡಿದರು. ಸಂಕಷ್ಟದ ಸಮಯದಲ್ಲಿ ಕರೆ ಮಾಡಿದರೆ ಪೊಲೀಸರು ಆಗಮಿಸುತ್ತಾರೆ. ಆಪತ್ತಿನಲ್ಲಿರುವ ಜನರು 112 ನಂಬರ್ ಗೆ ಕರೆ ಮಾಡುವಂತೆ ಹಾಗೂ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g