May 18, 2024

MALNAD TV

HEART OF COFFEE CITY

ಕಾಂಗ್ರೆಸ್ ವಿರುದ್ಧ ಸಿ.ಟಿ.ರವಿ ವಾಗ್ದಾಳಿ,ಸಿದ್ದು- ಡಿಕೆಶಿಗೆ ಬಿಜೆಪಿಗೆ ಆಹ್ವಾನಿಸಿದ ಶಾಸಕ ಸಿ.ಟಿ.ರವಿ

1 min read

 

ಚಿಕ್ಕಮಗಳೂರು : ಕಾಂಗ್ರೆಸ್ ಅನ್ಯಾಯ ಮಾಡಿದೆ. ಬಿಜೆಪಿ ಸೇರ್ತಿವಿ ಅಂದ್ರೇ ಬನ್ನಿ ಅತೆಂವೇ. ಆ ಸಾಲಿನಲ್ಲಿ ದೊಡ್ಡ ಮುಖಂಡರು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕರು ಬರ್ತಿವಿ ಅಂದ್ರೇ ಬನ್ನಿ ಅನ್ನುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಪರೋಕ್ಷವಾಗಿ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನು ಬಿಜೆಪಿಗೆ ಆಹ್ವಾನಿಸಿದರು.

ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗೋವಾದಲ್ಲಿ 11ಜನ ಶಾಸಕರಲ್ಲಿ 9ಜನ ಬಿಜೆಪಿಗೆ ಬಂದರೂ. ನಾವು ಯಾರಿಗೂ ಡಿಮ್ಯಾಂಡ್ ಮಾಡಿ ಬನ್ನಿ ಅಂದಿಲ್ಲ. ಅವರೇ ಬಂದು ಸೇರು ತ್ತೇವೆ ಎಂದಾಗ ಬೇಡ ಅನ್ನಲು ನಾವೇನು ಸನ್ಯಾಸಿಗಳಲ್ಲ ವಿಪಕ್ಷ ನಾಯಕರು ಬರ್ತಿವಿ ಅಂದ್ರೇ ಬನ್ನಿ ಅನ್ನುತ್ತೇವೆಂದು ವಿಪಕ್ಷ ನಾಯಕರನ್ನು ಆಹ್ವಾನಿಸಿದರು.

ರಾಜಕೀಯದಲ್ಲಿ ಆತ್ಮತೃಪ್ತಿ ಅಥವಾ ಭವಿಷ್ಯ ಎರಡರಲ್ಲಿ ಒಂದಿರಬೇಕು. ಈಗ ಕಾಂಗ್ರೆಸ್‍ನಲ್ಲಿ ಆತ್ಮತೃಪ್ತಿ, ಭವಿಷ್ಯ ಎರಡು ಇಲ್ಲ. ಆ ಪಕ್ಷದಲ್ಲಿ ಯಾರಿರ್ತಾರೆ. ಹೆತ್ತವರಿಗೆ ಹೆಗ್ಗಣ ಮುದ್ದು, ಉಳಿದವರಿಗೆ ಮುದ್ದಾಗುತ್ತಾ, ಹಾಗಾಗಿದೆ ಕಾಂಗ್ರೆಸ್ ಸ್ಥಿತಿ ಎಂದು ಲೇವಡಿ ಮಾಡಿದರು.

ಕೊತ್ವಾಲ್ ರಾಮಚಂದ್ರ ಶಿಷ್ಯರೂ ರಾಜಕಾರಣದಲ್ಲಿ ಇದ್ದಾರೆ. ಅವರಿಂದ ತೊಂದರೆಯಾಗಬಾರದು ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಸಿದ್ಧರಾಮಯ್ಯ ರವರಿಗೆ ಹೆಚ್ಚಿನ ಭದ್ರತೆ ಕುರಿತು ವ್ಯಂಗ್ಯವಾಡಿದರು.

ಕಾಂಗ್ರೆಸ್ ನವರಿಗೆ ರಾಷ್ಟ್ರೀಯತೆ ಮೂಲ ಹೇಗೆ ಗೊತ್ತಾಗುತ್ತದೆ, ಕಾಂಗ್ರೆಸಿಗಿರುವುದು ಇಟಲಿ ಮೂಲದ ನೇತೃತ್ವ ಅವರಿಗೇಗೆ ಭಾರತದ ಮೂಲ ಗೊತ್ತಾಗುತ್ತದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಆರ್ ಎಸ್ ಎಸ್ ಮೂಲ ಹೇಗೆ ಗೊತ್ತಾಗುತ್ತದೆ ನೆಹರು ಮೂಲವೇ ಕಾಂಗ್ರೆಸ್ ನವರಿಗೆ ಗೊತ್ತಾಗಿಲ್ಲ, ನಾನು ಕಾಂಗ್ರೆಸ್ ಬೆಂಬಲದಿಂದ ಯಾವತ್ತೂ ಗೆದ್ದಿಲ್ಲ, ಜನರ ಬೆಂಬಲದಿಂದ ಗೆದ್ದಿದ್ದೇನೆ, ಜನ ಗೆಲ್ಲಿಸಿರೋದು ನಾನು ಮಾಡಿರುವ ಕೆಲಸದಿಂದ ಜನ ನನ್ನ ಗೆಲ್ಲಿಸಿದ್ದಾರೆ ಪಕ್ಷ ಹಾಗೂ ಸಿದ್ಧಾಂತ ನನ್ನನ್ನ ಬೆಳೆಸಿದೆ, ಜನ ನಮ್ಮ ಜೊತೆ ಇದ್ದಾರೆ ಎಂದರು..

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!