ಸಿ.ಎಂ. ಬದಲಾವಣೆ ಬಗ್ಗೆ ಏನು ಹೇಳಿದ್ರು ಗೊತ್ತಾ ಶಾಸಕ ಎಂ.ಪಿ. ಕುಮಾರಸ್ವಾಮಿ…!?
1 min readಚಿಕ್ಕಮಗಳೂರು : ಸಿ.ಎಂ. ಬದಲಾವಣೆ ಬೇಡವೇ ಬೇಡ. ಯಡಿಯೂರಪ್ಪನವರು ಬಿಟ್ರೆ ಬಿಜೆಪಿಯಲ್ಲಿ ಮಾಸ್ ಲೀಡರ್ ಯಾರು ಇಲ್ಲ ಸಿ.ಎಂ. ಯಡಿಯೂರಪ್ಪ ಪರ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಬ್ಯಾಟಿಂಗ್ ಬೀಸಿದ್ದಾರೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಮಾಡೋದು ಬೇಡ.. ನಾನೊಬ್ಬ ಶಾಸಕನಾಗಿ ಹೈಕಮಾಂಡ್ ಗೆ ಮನವಿ ಮಾಡ್ತೇನೆ. ಯಡಿಯೂರಪ್ಪನವರೇ ಸಿ.ಎಂ. ಆಗಿ ಮುಂದುವರೆಯಲಿ. ಯಡಿಯೂರಪ್ಪನವರನ್ನು ಬದಲಾವಣೆ ಮಾಡಿದರೆ ಬಿಜೆಪಿಗೆ ತುಂಬಲಾರದ ನಷ್ಟ ಉಂಟಾಗುತ್ತೆ. ಯಡಿಯೂರಪ್ಪನವರಿಗೆ ಯಡಿಯೂರಪ್ಪ ನವರೇ ಸಮ. ಯಡಿಯೂರಪ್ಪನವರೇ ಉಳಿದ ಅವಧಿಗೂ ಸಿಎಂ ಆಗಿ ಮುಂದುವರಿಬೇಕೆಂದು ಜನರು ಅಪೇಕ್ಷೆ ಪಡುತ್ತಿದ್ದಾರೆ. ಬದಲಾವಣೆ ಮಾಡಿದರೆ ಬಿಜೆಪಿ ಮುಂದಿನ ದಿನಗಳಲ್ಲಿ ಅದರ ಫಲ ಅನುಭವಿಸಲಿದೆ. ಮುಂದಿನ ಚುನಾವಣೆವರೆಗೆ ಯಡಿಯೂರಪ್ಪನವರೇ ಮುಂದುವರೆಯಲಿ. ರಾಜ್ಯದ ಜನರು ಕೂಡ ಬಿ.ಎಸ್.ವೈ. ಸಿ.ಎಂ. ಆಗಿ ಮುಂದುವರೆಯಲಿ ಅಂತಾ ಹೇಳ್ತಾ ಇದ್ದಾರೆ. ಎಂದು ಮೂಡಿಗೆರೆ ಶಾಸಕ ಎಂ.ಪಿ. ಕುಮಾರಾ ಸ್ವಾಮಿ ತಿಳಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g