ಅನ್ವರ್ ಕೊಲೆ ಕುರಿತಂತೆ ಸಹೋದರ ಕಬೀರ್ ಸ್ಪೋಟಕ ಹೇಳಿಕೆ…?
1 min readಚಿಕ್ಕಮಗಳೂರು : ಕೊಲೆಯಾದ ಅನ್ವರ್ನ ಸಾವಿನ ತನಿಖೆಯನ್ನು ಚುರುಕುಗೊಳಿಸಿ 2 ತಿಂಗಳ ಒಳಗೆ ಕೊಲೆಗಾರರನ್ನು ಬಂಧಿಸಬೇಕೆಂದು ಅನ್ವರ್ ಸಹೋದರ ಕಬೀರ್ ಸುದ್ದಿಗೋಷ್ಠಿ ನಡೆಸಿ ಸರ್ಕಾರ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯ ನಂತರ ಮಾತನಾಡಿದ ಅವರು 2018 ರ ಜೂನ್ 22 ರಂದು ನನ್ನ ಅಣ್ಣಾ ಅನ್ವರ್ನ ಗೌರಿಕಾಲುವೆಯಲ್ಲಿ ಕೊಲೆಯಾಯಿತು. ಈ ಕೊಲೆಯಿಂದ ಚಿಕ್ಕಮಗಳೂರು ಜಿಲ್ಲೆಯೆ ಬೆಚ್ಚಿ ಬಿದ್ದಿತ್ತು. ಕೊಲೆಯಾಗಿ ಮೂರು ವರ್ಷಗಳೆ ಕಳೆದರು ಪೊಲೀಸ್ ಇಲಾಖೆಯಾಗಲಿ, ಸರ್ಕಾರವಾಗಲಿ ನಮಗೆ ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ. ಈ ಹಿಂದೆ ರಕ್ಷಣಾಧಿಕಾರಿಗಳಾದ ಅಣ್ಣಾಮಲೈ 40 ದಿನದೊಳಗೆ ಕೊಲೆಗಾರರನ್ನು ಹಿಡಿದು ನ್ಯಾಯ ಕೊಡಿಸುತ್ತೇವೆ ಎಂದು ಹೇಳಿದರು. 40 ದಿನ ಕಳೆದು ನಾಲ್ಕು ತಿಂಗಳು ಕಳೆದಾಗ ಅವರು ಬೇರೆಡೆ ವರ್ಗಾವಣೆಯಾದರು. ನಂತರ ಬಂದ ಹರೀಶ್ ಪಾಂಡೆಯವರು ಎರಡಯ ತಿಂಗಳ ಒಳಗೆ ಕೊಲೆ ಕೇಸನ್ನು ಬೇದಿಸುತ್ತೇವೆ ಎಂದು ಹೇಳಿದರು. ಎರಡು ವರ್ಷ ಕಳೆದ ನಂತರ ಅವರು ವರ್ಗಾವಣೆಗೊಂಡರು. ಸಿ.ಐ.ಡಿ ಯವರಿಗೆ ಕೇಸ್ ಒಪ್ಪಿಸಿ ಒಂದುವರೆ ವರ್ಷಗಳೆ ಕಳೆದಿದೆ. ಈ ಒಂದುವರೆ ವರ್ಷಗಳಲ್ಲಿ ಏಳು ಜನ ತನಿಖಾಧಿಕಾರಿಗಳನ್ನು ಬದಲಾಯಿಸಲಾಗಿದೆ. ಇದರಿಂದ ತನಿಖೆಯ ವೇಗ ಪಡೆಯುತ್ತಿಲ್ಲ. ತನಿಖೆ ನಡೆಸಿದ ಅಧಿಕಾರಿಗಳು ನಿಮ್ಮ ಅಣ್ಣ ದೊಡ್ಡ ವ್ಯಕ್ತಿಗಳ ಹತ್ತಿರ ಸಾವಿನ ಹಿಂದೆ ದೊಡ್ಡ ವ್ಯಕ್ತಿಗಳ ಕೈ ಇದೆ ಎಂದು ಹೇಳುತ್ತಾರೆ. ಅಣ್ಣನ ಸಾವಿನ ಕೊರಗಿನಲ್ಲಿ ತಂದೆ ಸಾವನಪ್ಪಿದ್ದು, ತಾಯಿ ಹಾಸಿಗೆ ಹಿಡಿದಿದ್ದಾರೆ. ನನಗೆ ಜೀವ ಭಯ ಕಾಡುತ್ತಿದೆ. ಇನ್ನೂ ಎರಡು ತಿಂಗಳ ಒಳಗೆ ಕೊಲೆಗಾರರನ್ನು ಹಿಡಿಯಬೇಕು. ಇಲ್ಲದಿದ್ದರೆ ರಾಷ್ಟ್ರಪತಿಯವರಿಗೆ ಹಾಗೂ ರಾಜ್ಯಪಾಲರಿಗೆ ಕುಟುಂಬ ಸಮೇತ ದಯಾ ಮರಣ ಕೋರಿ ಪತ್ರ ಬರೆಯಲಾಗುತ್ತದೆ ಎಂದು ಹೇಳಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://www.youtube.com/channel/UCmBISI2sn_0gamb44UFj-vQ
Credits:
Music : latest 2020 6 different no copyright news background music, royalty free (black mart)
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g