ನಕಲಿ ದಾಖಲೆ ಸೃಷ್ಠಿಯಲ್ಲಿ ದಲ್ಲಾಳಿ ಕೇಶವ್ ಹಾಗೂ ನಗರ ಸಭೆ ಅಧಿಕಾರಿ ಶಾಮೀಲು ಆರೋಪ
1 min readಚಿಕ್ಕಮಗಳೂರು : ಮನೆ ಕಂದಾಯ ಕಟ್ಟಿಸಿಕೊಳ್ಳುವ ನೆಪದಲ್ಲಿ ನಕಲಿ ಬಿಲ್ ಸೃಷ್ಟಿಸಿದ ಆರೋಪದಲ್ಲಿ ಇಬ್ಬರು ನಗರಸಭೆಯ ಸಿಬ್ಬಂದಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರಸಭೆಯ ಬಿಲ್ ಕಲೆಕ್ಟರ್ ಶಾಮ್ ಹಾಗೂ ಬ್ರೋಕರ್ ಕೇಶವ್ ರನ್ನು ಚಿಕ್ಕಮಗಳೂರು ನಗರ ಠಾಣೆ ಪೋಲಿಸರು ನಗರಸಭೆ ಆಯುಕ್ತ ಬಸವರಾಜ್ ದೂರನ್ನು ಆಧರಿಸಿ ವಶಕ್ಕೆ ಪಡೆದು ವಿಚಾರ ನಡೆಸಿದ್ದಾರೆ.
ಕಳೆದ 6 ತಿಂಗಳಿಂದ ಸಾರ್ವಜನಿಕರು ಕಟ್ಟಬೇಕಿದ್ದ ಆಸ್ತಿ ತೆರಿಗೆಯನ್ನು ನಗರಸಭೆಯಲ್ಲಿ ನೇರವಾಗಿ ಕಟ್ಟದೆ ಬ್ರೊಕರ್ಗಳಿಗೆ ಹಣ ನೀಡಿರುವುದೇ ದುರ್ಬಳಕೆಗೆ ಕಾರಣವಾಗಿದೆ. ಇದೀಗ ಪ್ರಕರಣ ಬೆಳಕಿಗೆ ಬಂದಿದ್ದು ನಕಲಿ ಸೀಲ್, ಚಲನ್, ಹಾಗೂ ಸಹಿ ಪೋರ್ಜರಿ ಸಹ ನಡೆದು ಲಕ್ಷಾಂತರ ರೂಪಾಯಿ ಸರ್ಕಾರಕ್ಕೆ ಸೇರಬೇಕಾದ ಹಣ ದುರ್ಬಳಕ್ಕೆಯಾದಂತಾಗಿದೆ, ನಗರಸಭೆ ಸಿಬ್ಬಂದಿ ಹಾಗೂ ಬ್ರೊಕರ್ ಗಳೇ ಇದರಲ್ಲಿ ಶಾಮಿಲಾಗಿದ್ದು ಪ್ರಕರಣ ಇನ್ನಷ್ಟು ಗಂಭೀರವಾಗಿದ್ದು ಈ ಜಾಲದಲ್ಲಿ ಇನ್ನು ಹಲವರು ಸೇರಿರುವ ಶಂಕೆ ವ್ಯಕ್ತವಾಗಿದೆ ಇದೇ ವೇಳೆ ಕೂಲಂಕುಶ ತನಿಖೆಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g