ಬ್ರಾಹ್ಮಣ ಮಹಾಸಭಾ ತಾಲ್ಲೂಕು ಅಧ್ಯಕ್ಷ ಅಕ್ರಮಗಳ ಸರದಾರ: ಶ್ರೀಧರ್ ಆರೋಪ
1 min readಚಿಕ್ಕಮಗಳೂರು: ಬ್ರಾಹ್ಮಣ ಮಹಾಸಭಾ ಚುನಾವಣೆಗೆ ಇನ್ನೆರಡೇ ದಿನ ಬಾಕಿ ಉಳಿದಿವೆ. ಈ ನಡುವೆ ಸಂಘಗಳ ನಡುವಿನ ಸಂಘರ್ಷ ತಾರಕಕ್ಕೇರಿದ್ದು ಮಂಜುನಾಥ್ ಜೋಶಿ ಬಣದ ಎದುರು ಶ್ರೀಧರ್ ಬಣ ಕೆಂಡಕಾರಿದೆ. ಅಕ್ರಮಗಳ ಸರದಾರ ಜೋಶಿ ಎಂದು ಆರೋಪಗಳ ಸುರಿಮಳೆಯನ್ನೇ ಸುರಿಸಿದೆ.
ಬ್ರಾಹ್ಮಣ ಮಹಾಸಭಾ ಸಂಘಗಳ ನಡುವಿನ ಕಿತ್ತಾಟ ವರ್ಷಗಳ ನಂತರ ಇದೀಗ ಭಾನುವಾರ ನಡೆಯಲಿರುವ ಚುನಾವಣೆ ಹೊಸ್ತಿಲಲ್ಲಿ ಮತ್ತೆ ಮುನ್ನಲೆಗೆ ಬಂದಿದೆ. ತಾಲ್ಲೂಕು ಸಂಘಕ್ಕೆ ಚುನಾವಣೆ ನಡೆಯುತ್ತಿದ್ದರೂ ಜಿಲ್ಲಾ ಸಂಘವೇ ಅಖಾಡಕ್ಕೆ ಇಳಿದಿರುವುದು ಜಿದ್ದಾ ಜಿದ್ದಿ ಏರ್ಪಡುವಂತೆ ಮಾಡಿದ್ದು, ಪ್ರತಿಷ್ಟೆಗೆ ನಿಂತಿರುವ ಎರಡೂ ಬಣಗಳು ಗೆಲುವಿಗಾಗಿ ಪಣ ತೊಟ್ಟಿವೆ.
ಇತ್ತ ಮಂಜುನಾಥ್ ಜೋಶಿ ವಿರುದ್ಧ ಇಡೀ ಜಿಲ್ಲಾ ಬ್ರಾಹ್ಮಣ ಮಹಾಸಭಾ ತೀವ್ರ ಪೈಪೋಟಿಗೆ ಇಳಿದಿದ್ದು ಜೋಶಿ ಅಕ್ರಮಗಳ ಸರಮಾಲೆಯನ್ನೇ ಬಿಚ್ಚಿಟ್ಟಿದೆ. ಮಾಂಸಹಾರ ಮಾಡುವ ಹಾಸ್ಟೆಲ್ ಗೆ ಕಟ್ಟಡ ನೀಡಿರುವ, ಸಂಘದ ಹಣ ದುರುಪಯೋಗ ಮಾಡಿರುವ, ದುರಾಡಳಿತ ನಡೆಸುತ್ತಿರುವ ಚುನಾವಣೆಯಲ್ಲಿ ಸ್ಪರ್ಧಿಸುವ ಎದುರಾಳಿಗಳಿಗೆ ಧಮ್ಕಿ ಹಾಕಿರುವ, ಚುನಾವಣಾ ಅಕ್ರಮ ನಡೆಸುತ್ತಿರುವುದು, ಸರ್ಕಾರಿ ಅಧಿಕಾರಗಳನ್ನು ಕೈಗೊಂಬೆ ಮಾಡಿಕೊಂಡಿರುವುದು, ಸಂಘದ ಹೆಸರಿನಲ್ಲಿ ರಾಜಕಾರಣ ಮಾಡುವುದು ಹೀಗೆ ದೊಡ್ಡ ಆರೋಪ ಪಟ್ಟಿಯನ್ನು ಮಂಜುನಾಥ್ ಜೋಶಿ ವಿರುದ್ಧ ಜಿಲ್ಲಾ ಬ್ರಾಹ್ಮಣ ಮಹಾಸಭಾ ಹೊರಿಸಿದೆ.
ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ಶ್ರೀಧರ್ ಬಣದ 23 ಜನ ಸ್ಪರ್ಧೆಗೆ ಇಳಿದಿದ್ದು ಇದೇ ಭಾನುವಾರ ನಡೆಯಲಿರುವ ಚುನಾವಣೆಯಲ್ಲಿ ತೀವ್ರ ಪೈಪೋಟಿ ನಡೆಯುವುದು ಪಕ್ಕಾ ಆಗಿದೆ. ಈ ನಡುವೆ DAR, AR ಸೇರಿದಂತೆ ಕೆಲ ಅಧಿಕಾರಿಗಳು ಮಂಜುನಾಥ್ ಜೋಶಿ ಕಪಿಮುಷ್ಟಿಯಲ್ಲಿದ್ದು ಇದನ್ನು ತಪ್ಪಿಸಿ ನ್ಯಾಯ ಸಮ್ಮತ ಮತದಾನ ನಡೆಸುವಂತೆ ಜಿಲ್ಲಾಡಳಿತಕ್ಕೆ ಬ್ರಾಹ್ಮಣ ಮಹಾಸಭಾ ಮನವಿ ಮಾಡಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g