ಬಿಜೆಪಿ ಕಾರ್ಯಕರ್ತರಿಗೆ ಮೆಮೊರಿ ಲಾಸ್ ಆಗಿ ಹತಾಶೆಯಲ್ಲಿದ್ದಾರೆ; ಡಾ. ಪಿ ಅಂಶುಮಂತ್ ಟೀಕೆ
1 min readಚಿಕ್ಕಮಗಳೂರು: ಜಿಲ್ಲಾ ಉಸ್ತುವಾರಿ ಸಚಿವ ಕಾಣೆಯಾಗಿದ್ದಾರೆ ಎಂದು ಪೋಸ್ಟರ್ ಅಂಟಿಸಿದ ಬಿಜೆಪಿ ಕಾರ್ಯಕರ್ತರಿಗೆ ಮೆಮೊರಿ ಲಾಸ್ ಆಗಿ ಹತಾಶೆಯಲ್ಲಿದ್ದು, ನೈತಿಕ ಆತ್ಮ ಸ್ಥೈರ್ಯ ಕಳೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಪಿ ಅಂಶುಮಂತ್ ಹೇಳಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಬಿಜೆಪಿ ಪೋಸ್ಟರ್ ಅಂಟಿಸಿದ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ, ಕೆಲವರು ಬಿಜೆಪಿ ಕಾರ್ಯಕರ್ತರನ್ನು ತಪ್ಪುದಾರಿಗೆ ಕರೆದುಕೊಂಡು ಹೋಗುತ್ತಿದ್ದಾರೆ , ಪ್ರತಿಭಟನೆ ನಡೆಸುವವರು ರಚನಾತ್ಮಕವಾಗಿ ಹೋರಾಟ ಮಾಡಿ ಜವಾಬ್ದಾರಿಯುತವಾಗಿ ಸಲಹೆ ನೀಡಬೇಕೆ ಹೊರತು ಅಪಪ್ರಚಾರ ಮಾಡಿ ವ್ಯರ್ಥ ಪ್ರಯತ್ನ ಮಾಡಬಾರದು ,, ಜಿಲ್ಲೆಯಿಂದ ಕಾಣೆಯಾಗಿರುವುದು ಶೋಭಾ ಕರಂದ್ಲಾಜೆ ಮೊದಲು ಅವರನ್ನು ಹುಡುಕಿ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ದನಿಯಾಗಬೇಕಿದ್ದ ಶೋಭಾ ಸಂಪೂರ್ಣ ವಿಫಲರಾಗಿದ್ದಾರೆ. ಬಿಜೆಪಿ ಅಧಿಕಾರ ದಲ್ಲಿದ್ದಾಗ ವರ್ಷಗಳ ಕಾಲ ಉಸ್ತುವಾರಿ ಸಚಿವರೇ ಇರಲಿಲ್ಲ ಎಂದು ಅಂಶುಮಂತ್ ಟೀಕಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g