ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಬಿ.ಜೆ.ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಬಿಚ್ಚಿಟ್ಟ ರೋಚಕ ಸತ್ಯ…!
1 min readಚಿಕ್ಕಮಗಳೂರು : ಬಿ.ಜೆ.ಪಿ ಪಕ್ಷದವತಿಯಿಂದ ಕೊರೋನ ಸೋಂಕಿನಿಂದ ಮೃತರಾದ ಚಿತಾಭಸ್ಮವನ್ನು ಸಾಮೂಹಿಕವಾಗಿ ಅಸ್ತಿ ಶುದ್ದಿಕರಣದ ಪೂಜಾ ವಿದಿವಿಧಾನಗಳೊಂದಿಗೆ ಚಿಕ್ಕಮಗಳೂರು ತಾಲೂಕಿನ ಖಾಂಡ್ಯದ ಭದ್ರಾ ನದಿಯಲ್ಲಿ ಅಸ್ತಿ ವಿರ್ಸಜನೆ ಮಾಡಲಾಯಿತು.
ಕೊರೋನ ಸೋಂಕಿನಿಂದ ಮೃತರಾದ ದೇಹವನ್ನು ಉಪ್ಪಳ್ಳಿ ಚಿತಾಗಾರದಲ್ಲಿ ದಹಿಸಲಾಗಿತ್ತು. ವಾರಸುದಾರರಿಲ್ಲದ ಹಾಗೂ ಕಾರಣಾಂತರಗಳಿಂದ ತೆಗೆದುಕೊಂಡು ಹೋಗದ ಒಟ್ಟು 46 ಚಿತಾಭಸ್ಮವನ್ನು ಸಾಮೂಹಿಕವಾಗಿ ಖಾಂಡ್ಯ ಅಸ್ತಿ ಶುದ್ದಿಕರಣ ಪೂಜಾ ವಿದಿವಿಧಾನಗಳನ್ನು ನಡೆಸಿ ಖಾಂಡ್ಯದ ಭದ್ರಾ ನದಿಯಲ್ಲಿ ಅಸ್ತಿ ವಿರ್ಸಜನೆ ಮಾಡಲಾಯಿತು.
ಈ ವೇಳೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ. ರವಿ, ಜೀವರಾಜ್, ಕಲ್ಮರುಡಪ್ಪ ಸೇರಿದಂತೆ ನೂರಾರು ಬಿ.ಜೆ.ಪಿ ಕಾರ್ಯಕರ್ತರು ಭಾಗಿಯಾಗಿದ್ದರು.
ಇದೇ ವೇಳೆ ಮಾತನಾಡಿದ ಬಿ.ಜೆ.ಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚುವುದು ಕಷ್ಟದ ಕೆಲಸವಲ್ಲ. ಎಷ್ಟು ದಿನ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾರೆ. ಒಂದು ದಿನ ಪತ್ತೆಯಾಗುತ್ತಾರೆ. ಪಕ್ಷವು ಎಲ್ಲವನ್ನು ಗಮನಿಸುತ್ತಿರುತ್ತದೆ. ಯಾವಾಗ ಏನು ಕ್ರಮ ತೆಗೆದುಕೊಳ್ಳಬೇಕೊ ತೆಗೆದು ಕೊಳ್ಳುತ್ತದೆ. ಉದ್ದೇಶ ಪೂರ್ವಕವಾಗಿಯೋ ಅಥವಾ ದುರುದ್ದೇಶ ಪೂರ್ವಕವಾಗಿಯೋ ಸುಳ್ಳು ಸುದ್ದಿ ಹಬ್ಬಿಸುತ್ತಿರಬಹುದು. ಮುಖ್ಯಮಂತ್ರಿ ಬದಲಾವಣೆ ಎನ್ನುವುದು ಸುಳ್ಳು ಸುದ್ದಿಯಾಗಿದೆ. ಜೊತೆಗೆ ಅರುಣ್ ಸಿಂಗ್ ವರದಿ ಕೊಟ್ಟರು ಎನ್ನುವುದು ಸುಳ್ಳುಸುದ್ದಿಯಾಗಿದೆ . ಕೆಲಸ ಇಲ್ಲದವರು ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ಮಾಡುತ್ತಾರೆ ಎಂದು ಹೇಳಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://www.youtube.com/channel/UCmBISI2sn_0gamb44UFj-vQ
Credits:
Music : latest 2020 6 different no copyright news background music, royalty free (black mart)
9th new taluk center in Chikkamagaluru
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g