ಭೋಜೇಗೌಡರಿಂದ ಮತದಾರರಿಗೆ ಬೆದರಿಕೆ..? ನಂಜೇಶ್ ಬೆಣ್ಣೂರು ಆರೋಪ
1 min readಚಿಕ್ಕಮಗಳೂರು: ವಾಯುವ್ಯ ಶಿಕ್ಷಕರ ಕ್ಷೇತ್ರದ ಹಾಲಿ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡ ಮತದಾರರಿಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಸ್ವತಂತ್ರ ಅಭ್ಯರ್ಥಿ ನಂಜೇಶ್ ಬೆಣ್ಣೂರು ಗಂಭೀರ ಆರೋಪ ಮಾಡಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಂಜೇಶ್ ಬೆಣ್ಣೂರು ಜಿಲ್ಲೆಯ ಕೆಲ ಶಿಕ್ಷಕರಿಗೆ ಎಸ್ ಎಲ್ ಭೋಜೇಗೌಡ ಭಯ ಉಂಟುಮಾಡುವಂತೆ ಮಾಡಿದ್ದು ಇದು ಚುನಾವಣಾ ಅಕ್ರಮ ಎಂದು ಆರೋಪಿಸಿದರು. ಅಲ್ಲದೇ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಸಲ್ಲಿಸುವ ಅರ್ಜಿ ಮಾದರಿಯಲ್ಲಿ ಭೋಜೇಗೌಡ ಫೋಟೋ ಇದ್ದು ಈ ಅರ್ಜಿ ಮಾತ್ರ ಊರ್ಜಿತ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದರು.
ಇದೇ ವೇಳೆ ಮಾತನಾಡಿದ ನಂಜೇಶ್ ಬೆಣ್ಣೂರು ನವೆಂಬರ್ 6 ರೊಳಗೆ ಮತದಾರರ ಪಟ್ಟಿಗೆ ಸೇರ್ಪಡೆಗೆ ಕೊನೆ ದಿನವಾಗಿತ್ತು ಆದರೆ ಈಗಲೂ ಸಹಾ ಅರ್ಜಿ ಸಲ್ಲಿಸಲು ಅವಕಾಶ ಇದ್ದು ಕೊನೆದಿನ ಅಧಿಕೃತವಾಗಿ ಮುಂದೂಡಬಹುದು. ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಇಲ್ಲಿಯವರೆಗೆ ಅರ್ಜಿಯನ್ನು ಸಲ್ಲಿಸದೆ ಇದ್ದವರು ಅರ್ಜಿ ಸಲ್ಲಿಸಬಹುದು ಎಂದ ಅವರು ಸುಮಾರು 18 ಸಾವಿರ ಅರ್ಜಿಗಳು ಆರು ಜಿಲ್ಲೆಗಳಿಂದ ತಲುಪಿದೆ ಇನ್ನು ಯಾವ ಶಿಕ್ಷಕರು ಅರ್ಜಿಯನ್ನ ಸಲ್ಲಿಸಿಲ್ಲವೋ ಅವರು ಸಲ್ಲಿಸಿ ಎಂದು ಮನವಿ ಮಾಡಿದರು. ಇಲ್ಲಿ ಪ್ರತಿಯೊಂದು ಮತವು ಅಮೂಲ್ಯವಾದದ್ದು, ಯುವಶಕ್ತಿಗೆ ಒಂದು ಅವಕಾಶವನ್ನು ಕೊಡಿ. ನಾನು ನಿಮ್ಮ ಪರವಾಗಿ ಧ್ವನಿಯಾಗಿ ನಿಲ್ಲುತ್ತೇನೆ ಎಂದು ಭರವಸೆ ನೀಡಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g