ಕೋಡಿ ಬಿದ್ದ ಹಿನ್ನೆಲೆ ಬಾಗಿನ ಅರ್ಪಿಸಿದ ಜನಪ್ರತಿನಿಧಿಗಳು
1 min readಚಿಕ್ಕಮಗಳೂರು : ಕಡೂರು ತಾಲೂಕಿನ ಸಖರಾಯಪಟ್ಟಣದ ಅಯ್ಯನಕೆರೆ ಕೋಡಿ ಬಿದ್ದ ಹಿನ್ನೆಲೆ ಜನಪ್ರತಿನಿಧಿಗಳು ಹಾಗೂ ವಿವಿಧ ಮಠಾಧೀಶರು ಅಯ್ಯನಕೆರೆಗೆ ಬಾಗಿನ ಅರ್ಪಿಸಿದರು.
ಅಯ್ಯನಕೆರೆಗೆ ತೆರಳುವ ಆರಂಭದಲ್ಲೆ ಸಿಗುವ ಈಶ್ವರನಿಗೆ ಪುಜೆ ಸಲ್ಲಿಸಿದ ಶಾಸಕ ಸಿ.ಟಿ. ರವಿ, ಪಲ್ಲವಿ ಸಿ.ಟಿ. ರವಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೆಗೌಡ ಹಾಗೂ ವಿವಿಧ ಸ್ವಾಮೀಜಿಗಳು ನಂತರ ಅಯ್ಯನಕೆರೆಯಲ್ಲಿ ಗಂಗಾ ಮಾತೆಗೆ ಪೂಜೆ ಸಲ್ಲಿಸಿ ಶ್ರದ್ಧಾಭಕ್ತಿಯಿಂದ ಕೆರೆಗೆ ಬಾಗಿನ ಅರ್ಪಿಸಿದರು.
ಈ ವೇಳೆ ಮಾತನಾಡಿದ ಶಾಸಕ ಸಿ.ಟಿ. ರವಿ ವರುಣನ ಕೃಪೆಯಿಂದ ಜುಲೈ ಮೊದಲ ವಾರದಲ್ಲೆ ಉತ್ತಮ ಮಳೆಯಾಗುತ್ತಿದ್ದು, ಇದರಿಂದ ತಾಲೂಕಿನ ಹಲವು ಕೆರೆಗಳು ತುಂಬಿ ಬಾಗಿನ ಅರ್ಪಿಸುವ ಸೌಭಾಗ್ಯ ಸಿಕ್ಕಿದೆ. ಲಿಪ್ಟ್ ನಿಂದಾಗಿ ಹಾಗೂ ಮಳೆಯಿಂದಾಗಿ ಬೆಳವಾಡಿ ದೊಡ್ಡಕೆರೆಯು ತುಂಬುವ ಹಂತ ತಲುಪಿದ್ದು, ಬಾಗಿನ ಅರ್ಪಿಸುವ ಆಶಯವಿದೆ. ಸನಾತನಿಗಳು ಪ್ರಕೃತಿಯಲ್ಲಿ ದೇವರನ್ನು ಕಂಡಿರುವುದು ಮೂಡನಂಬಿಕೆಯಲ್ಲ, ಅದು ಪ್ರಕೃತಿ ತತ್ವದ ವೈಜ್ಞಾನಿಕ ಸತ್ಯವಾಗಿದೆ ಎಂದು ಹೇಳಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g