April 29, 2024

MALNAD TV

HEART OF COFFEE CITY

ಬಿ.ವೈ ವಿಜಯೇಂದ್ರ ಕಾರಿಗೆ ಅಡ್ಡಬಂದ ಟಾಟಾ ಏಸ್ : ಕೆಲಕಾಲ ಟ್ರಾಫಿಕ್ ಜಾಮ್

1 min read

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಾಹನಕ್ಕೆ ಟಾಟಾ ಏಸ್ ಅಡ್ಡ ಬಂದು ಕೆಲಕಾಲ ಟ್ರಾಫಿಕ್ ಜಾಮ್ ಉಂಟಾದ ಘಟನೆ ಮಾಜಿ ಶಾಸಕ ಸಿ.ಟಿ ರವಿ ಮನೆ ಬಳಿ ನಡೆದಿದೆ.

ಪೊಲೀಸರು ಎರಡೂ ಬದಿ ವಾಹನಗಳನ್ನು ಏಕಾಏಕಿ ಬಿಟ್ಟ ಪರಿಣಾಮ ಟಾಟಾ ಏಸ್ ವಾಹನ ವೊಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕಾರಿಗೆ ಮುಖಾಮುಖಿ ಅಡ್ಡಲಾಗಿ ನಿಂತು ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಚಿಕ್ಕಮಗಳೂರು ನಗರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ ಆರ್ ದೇವರಾಜ್ ಶೆಟ್ಟಿ ಪದಗ್ರಹಣ ಕಾರ್ಯಕ್ರಮ ಮುಗಿಸಿ ಊಟಕ್ಕೆಂದು ಮಾಜಿ ಶಾಸಕ ಸಿ.ಟಿ. ರವಿ ಮನೆಗೆ ತೆರಳಿ ವಾಪಸ್ಸಾಗುವ ವೇಳೆ ಒಮ್ಮೆಲೆ ಟಾಟಾ ಏಸ್ ವಾಹನ ಅಡ್ಡ ಬಂದು ನಿಂತಿದೆ. ಇದರಿಂದ ಪೊಲೀಸರು ಗಾಬರಿಯಾಗಿ ಟಾಟಾ ಏಸ್ ವಾಹನ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡರು. ಇದರಿಂದ ಮತ್ತಷ್ಟು ಸಿಟ್ಟಾದ ಚಾಲಕ ತನ್ನ ವಾಹನ ತೆಗೆಯಲು ಮತ್ತಷ್ಟು ವಿಳಂಬ ಮಾಡಿದ್ದಾನೆ. ಈ ವೇಳೆ ಬಿಜೆಪಿ ಕಾರ್ಯಕರ್ತರು ಬಂದು ಟಾಟಾ ಏಸ್ ಸವಾರನನ್ನು ಸಮಾಧಾನ ಪಡಿಸಿ ಕಳುಹಿಸಿದರು. ಅಷ್ಟರಲ್ಲಾಗಲೇ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಿ.ವೈ ವಿಜಯೇಂದ್ರ ಹೊರಟಿದ್ದನ್ನು ತಿಳಿದೂ ಸಹಾ ಸಂಚಾರ ವ್ಯವಸ್ಥೆ ಸುಗಮಗೊಳಿಸದೆ ಇದ್ದದ್ದು ಪೊಲೀಸರ ವೈಫಲ್ಯ ಎಂದು ಸಾರ್ವಜನಿಕರು ಮಾತನಾಡುತ್ತಿದ್ದರು ಮಧ್ಯಾಹ್ನವಾದ್ದರಿಂದ ಪೊಲೀಸರು ವಿರಳವಿದ್ದದ್ದು ಸಹಾ ಈ ಪ್ರಮಾದಕ್ಕೆ ಕಾರಣ ಎನ್ನಲಾಗುತ್ತಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!