April 29, 2024

MALNAD TV

HEART OF COFFEE CITY

ಆಗಸ್ಟ್ 22 ರಿಂದ 28 ರವರೆಗೆ ಶಿವಾನುಭವ ಸಪ್ತಾಹ

1 min read

ಚಿಕ್ಕಮಗಳೂರು : ಶಿವಾನುಭವ ಸಪ್ತಾಹವನ್ನು ಆಗಸ್ಟ್ 22 ರಿಂದ 28 ರವರೆಗೆ ದೊಡ್ಡ ಕುರುಬರಹಳ್ಳಿಯಲ್ಲಿರುವ ಶ್ರೀ ಬಸವ ಮಂದಿರದಲ್ಲಿ ನಡೆಸಲಾಗುವುದೆಂದು ಶ್ರೀ ಬಸವ ತತ್ವ ಪೀಠದ ಡಾ|| ಶ್ರೀ ಬಸವ ಮರುಳಸಿದ್ಧ ಸ್ವಾಮಿಗಳವರು ಹೇಳಿದರು.

ಮಲ್ನಾಡ್ ಟಿವಿಯೊಂದಿಗೆ ಮಾತನಾಡಿದ ಅವರು ದೇಶದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬೇಕೆನ್ನುವ ಹಿನ್ನೆಲೆಯಲ್ಲಿ ಶಿವಾನುಭವ ಸಪ್ತಾಹವನ್ನು ಆಗಸ್ಟ್ 22 ರಿಂದ 28 ರವರೆಗೆ ಕುರುಬರಹಳ್ಳಿಯಲ್ಲಿರುವ ಶ್ರೀ ಬಸವ ಮಂದಿರದಲ್ಲಿ ಆಚರಿಸಲಾಗುತ್ತಿದೆ. ಈ ಸಪ್ತಾಹದಲ್ಲಿ ಪ್ರತಿದಿನ ಖ್ಯಾತ ಸಂಪನ್ಮೂಲ ವ್ಯಕ್ತಿಗಳಿಂದ ಷಟಸ್ಥಲಗಳ ಕುರಿತು ಉಪನ್ಯಾಸ ನಡೆಸಲಾಗುವುದು. ಆಗಸ್ಟ್ 28ರ ಭಾನುವಾರದಂದು ಬೆಳಗ್ಗೆ 10-00 ಗಂಟೆಗೆ ರಕ್ತಾಮೃತ ದಾಸೋಹ ಎಂಬ ರಕ್ತದಾನ ಶೀಬಿರ ಹಾಗೂ ಸಂಜೆ 14 ನೇ ಶಿವಾನುಭವ ಗೋಷ್ಠಿ, ವಿಶ್ರಾಂತ ಯೋಧರಿಗೆ ಸನ್ಮಾನ, ಹಾಗೂ ಶಿವಾನುಭವ ಸಪ್ತಾಹದ ಸಮಾರೋಪವನ್ನು ನಡೆಸಲಾಗುವುದು ಎಂದು ಹೇಳಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!