ಅಶ್ವಥ್ ನಾರಾಯಣ್ ಮತ್ತು ಸಿ ಟಿ ರವಿ ವಿರುದ್ಧ ಕೆಪಿಸಿಸಿ ವಕ್ತಾರ ಕಿಡಿ
1 min readಚಿಕ್ಕಮಗಳೂರು: ಮೊನ್ನೆ ನಡೆದ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಹಿನ್ನಲೆ ಪ್ರತಿಕ್ರಿಯಿಸಿರುವ ಅಶ್ವಥ್ ನಾರಾಯಣ್ ಮತ್ತು ಸಿ ಟಿ ರವಿ ಅವರು ತಿರುಚಿ ಮಾತನಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನ ಬಿಡು ಆರೋಪಿಸಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಸಿಟಿ ರವಿ ಅವರದು ಕೆಟ್ಟ ಮನಸ್ಥಿತಿ, ಮಾನಸಿಕವಾಗಿ ಅವರು ಸರಿ ಇಲ್ಲ, ಮಾನಸಿಕ ಸಮತೋಲನ ಇಲ್ಲದಿರುವುದರಿಂದ ಯಾರಾದರೂ ವೈದ್ಯರನ್ನ ಸಂಪರ್ಕಿಸುವುದು ಒಳ್ಳೆಯದು ಎಂದ ಅವರು ರಾಜಕೀಯ ಮಾಡುತ್ತೇವೆ ಎಂದು ಕೆಟ್ಟ ರಾಜಕಾರಣ ಮಾಡಬಾರದು ಒಬ್ಬ ವ್ಯಕ್ತಿಯ ಸದನದ ತೇಜೋವಧೆ ಮಾಡಬಾರದು ಎಂದರು.
ಸಿ ಟಿ ಆರ್ ಮತ್ತು ಅಶ್ವಥ್ ನಾರಾಯಣ್ ಅವರು ಸಿದ್ದರಾಮಯ್ಯ ಅವರ ಮಾತುಗಳನ್ನು ತಿರುಚಿದ್ದಾರೆ. ತಿರುಚಿರುವುದು ಮಾತುಗಳಲ್ಲ ಇಡೀ ಸದನವನ್ನೇ ತಿರುಚಿದ ರೀತಿಯಲ್ಲಿ ಇದೆ, ಇಂತಹ ನಡವಳಿಕೆಯನ್ನು ಗಂಭೀರವಾಗಿ ಖಂಡಿಸುತ್ತೇವೆ ಎಂದು ಹೇಳಿದರು.
ಸಂಸತ್ತಿನಲ್ಲಿ ಹೊಗೆ ಬಾಂಬ್ ವಿಚಾರವಾಗಿ ಕಾಂಗ್ರೆಸ್ ಮೇಲೆ ಆರೋಪ ಮಾಡಿದ್ದ ಹಿನ್ನೆಲೆ ಮಾತನಾಡಿದ ಅವರು ಅಲ್ಲಪ್ಪಾ,, ಸಿಟಿ ರವಿ ನಿನಗೆ ವಿವೇಕ ತುಂಬಾ ಕಡಿಮೆ ಅದು ಹೇಗೆ 20 ವರ್ಷಗಳು ವಿಧಾನಸಭೆಯಲ್ಲಿ ಕುಳಿತು ಏನು ಮಾಡಿದ್ದೀಯಾ ಗೊತ್ತಿಲ್ಲ ಎಂದು ಈ ಕ್ಷೇತ್ರದವನಾಗಿ ನಾನು ಹೇಳುತ್ತೇನೆ. ಪ್ರತಾಪ್ ಸಿಂಹನವರ ಅಭಿಮಾನಿ ಎಂದು ಮನೋಜ್ ಅವರ ತಂದೆಯೇ ಹೇಳಿಕೊಂಡಿದ್ದಾರೆ ಆದ್ದರಿಂದ ಅವರು ಯಾವ ಪಕ್ಷದ ಕಾರ್ಯಕರ್ತರೆಂದು ಅವರೇ ಒಪ್ಪಿಕೊಂಡಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸುವಂತಹ ನಡವಳಿಕೆಯನ್ನು ಬಿಡಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಬರಗಾಲ ಸೃಷ್ಟಿಯಾಗಿದೆ. ಇಡೀ ರಾಜ್ಯಕ್ಕೆ ನೀರು ನೀಡುವ ಚಿಕ್ಕಮಗಳೂರು ಜಿಲ್ಲೆ ಬರಗಾಲವನ್ನು ಎದುರಿಸುತ್ತಿದೆ ಕೃಷಿ ಸಚಿವೆ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಜಿಲ್ಲೆಗೆ ನಾಮಕಾವಸ್ತೆ ಬಂದು ಹೋಗುತ್ತಿದ್ದಾರೆ. ಇಂತಹ ವಂಚನೆಯ ನಾಜೂಕಿನ ಕೆಲಸವನ್ನು ಬಿಟ್ಟುಬಿಡಿ. ಈ ರೀತಿಯ ವರ್ತನೆಯಿಂದ ಜನರಿಂದಲೇ ದೂರ ಉಳಿಯುವಂತಾಗುತ್ತದೆ ಎಂದು ಎಚ್ಚರಿಸಿದ್ರು. ಹೀಗೆ ಮುಂದುವರೆದರೆ ಜಿಲ್ಲೆಯ ಜನ ಶೋಭಾ ಕರಂದ್ಲಾಜೆ ಅವರನ್ನು ‘ಗೋ ಬ್ಯಾಕ್’ ಅನ್ನಲ್ಲ, ‘ಗೋ ಬ್ಯಾಕ್’ ಮಾಡ್ತಾರೆ. ಈ ಕ್ಷೇತ್ರದ ಜನರ ಋಣ ತೀರಿಸಲಾದರೂ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g