ಗರ್ಭೀಣಿ ಮಹಿಳೆ ಮೇಲೆ ಹಲ್ಲೆಗೈದ ಮಾಲೀಕನ ಬಂಧನಕ್ಕೆ ಆಕ್ರೋಶದ ಆಗ್ರಹ
1 min read
ಚಿಕ್ಕಮಗಳೂರು ತಾಲೂಕಿನ ಕಾಫಿ ತೋಟದಲ್ಲಿ ತೋಟದ ಮಾಲೀಕ ದಲಿತ ಗರ್ಭೀಣಿ ಹಲ್ಲೆ ಮಾಡಿದ್ದಾರೆ. ಆಕೆಗೆ ಗರ್ಭಪಾತ ಕೂಡ ಆಗಿದೆ. ಆದರೆ, ತೋಟದ ಮಾಲೀಕನ ವಿರುದ್ಧ ದೂರು ದಾಖಲಾಗಿ ಎರಡು ದಿನವಾದರೂ ಆತನನ್ನ ಬಂಧಿಸಿಲ್ಲ ಎಂದು ಸಾವಿರಾರು ಜನ ಪ್ರತಿಭಟನೆ
ನಡೆಸಿ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ 6 ದಲಿತ ಕುಟುಂಬಗಳ 14 ಜನರನ್ನ ಇಡೀ ದಿನ ತೋಟದ ಮಾಲೀಕ ಜಗದೀಶ್ ಗೌಡ ತೋಟದ ಮನೆಯಲ್ಲಿ ಕೂಡಿ ಹಾಕಿದ್ದರು. ಈ ವೇಳೆ, ಕೇಳಿದ ಕೂಡಲೇ ಮೊಬೈಲ್ ಹಿಂದಿರುಗಿಸಲಿಲ್ಲ ಎಂದು ಎರಡು ತಿಂಗಳ ಗರ್ಭೀಣಿ ಮೇಲೂ ಹಲ್ಲೆ ಮಾಡಿದ್ದರು. ಆದರೆ, ತೋಟದ ಮಾಲೀಕನ ಮೇಲೆ ಪ್ರಕರಣ ದಾಖಲಾಗಿ ಎರಡು ದಿನವಾದರೂ ಪೊಲೀಸರು ಅವರನ್ನ ಅರೆಸ್ಟ್ ಮಾಡಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿರುವ ದಲಿತ ಸಂಘಟನೆಗಳು ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಬಾಳೆಹೊನ್ನೂರು ಚಲೋ ಎಂಬ ಬೃಹತ್ ಜಾಥಾ ಕೈಗೊಂಡಿದ್ದಾರೆ. ಸಾವಿರಾರು ಜನ ಜಾಥಾದಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಹತ್ತಕ್ಕೂ ಹೆಚ್ಚು ದಲಿತ ಸಂಘಟನೆಗಳು ಜಾಥಾದಲ್ಲಿ ಪಾಲ್ಗೊಂಡು ಕೂಡಲೇ ಆರೋಪಿಗಳನ್ನ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g