May 16, 2024

MALNAD TV

HEART OF COFFEE CITY

ಅಮಿತ್ ಶಾ.. ಹೆಚ್.ಡಿ. ಕುಮಾರಸ್ವಾಮಿಯವರಿಗೆ ಸುಫಾರಿ ಕೊಟ್ಟಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪ

1 min read

ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎಚ್.ಡಿ.ಕುಮಾರಸ್ವಾಮಿಯವರಿಗೆ ಸುಫಾರಿ ಕೊಟ್ಟಿದ್ದು, ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಅನ್ನೋದು ಅವರ ಉದ್ದೇಶವಾಗಿದೆ ಎಂದು ಕೆ.ಪಿ.ಸಿ.ಸಿ ವಕ್ತಾರ ಲಕ್ಷ್ಮಣ್ ಆರೋಪಿಸಿದ್ದಾರೆ.‌

ಅಮಿತ್‌ ಶಾ ಮಾಜಿ ಸಿ.ಎಂ ಕುಮಾರಸ್ವಾಮಿ ಅವರಿಗೆ ರಾಜ್ಯ ಸರ್ಕಾರದ ವಿರುದ್ಧ ಮಾತನಾಡಲು ಸುಪಾರಿ ಕೊಟ್ಟಿದ್ದು, ಅಮಿತ್ ಶಾ ಕೊಟ್ಟಿರುವ ಕೆಲಸವನ್ನ ಕುಮಾರಸ್ವಾಮಿ ನೀಟಾಗಿ ಮಾಡುತ್ತಿದ್ದಾರೆ ಎಂದು ಕೆ.ಪಿ.ಸಿ.ಸಿ ವಕ್ತಾರರಾದ ಎಂ. ಲಕ್ಷ್ಮಣ್ ಆರೋಪಿಸಿದರು. ಬೆಳಗ್ಗೆ ಎದ್ರೆ ಪ್ರೆಸ್ ಮೀಟ್ ಮಾಡ್ಬೇಕು, ಸಂಜೆ ಪ್ರೆಸ್ ಮೀಟ್ ಮಾಡ್ಬೇಕು ಸಿದ್ದರಾಮಯ್ಯ ಅವರನ್ನು ಬಯ್ಬೇಕು, ಡಿ.ಕೆ.ಶಿವಕುಮಾರ್ ನ ಬಯ್ಬೇಕು ಅಷ್ಟೇ ಕುಮಾರಸ್ವಾಮಿ ಕೆಲಸ ಅವರು ಅದನ್ನೇ ಮಾಡುತ್ತಿದ್ದಾರೆ ಎಂದು ಲಕ್ಷ್ಮಣ್ ವ್ಯಂಗ್ಯವಾಡಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು ಎಚ್.ಡಿ. ಕುಮಾರಸ್ವಾಮಿ ಪೆನ್ ಡ್ರೈವ್ ತೋರ್ಸುದ್ರಲ್ಲಾ ಅದೇನಾಯ್ತು ದಯಮಾಡಿ ಹೇಳಿ ಎಂದು ಸವಾಲು ಎಸೆದಿದ್ದು,ಪ್ರತಿದಿನಾ ಪ್ರೆಸ್ ಮೀಟ್ ಮಾಡ್ತಾರೆ, ಎಲ್ಲಾದ್ರು ಲಾಜಿಕ್ ಎಂಡ್ ಗೆ ತೆಗೆದುಕೊಂಡು ಹೋಗ್ತಾರಾ
ಮಾಧ್ಯಮಗಳಿಗೆ ಬೆಳಗ್ಗೆಯಿಂದ ಸಂಜೆವರೆಗೆ ಚರ್ಚೆಗೆ ವಸ್ತು ಕೊಡ್ತಿದ್ದಾರೆ ಅಷ್ಟೆ ಯತೀಂದ್ರ ಸಿ.ಎಸ್.ಆರ್. ಫಂಡ್ ಬಗ್ಗೆ ಮಾತನಾಡೋದನ್ನೆ ಕುಮಾರಸ್ವಾಮಿ ದಂಧೆ…ದಂಧೆ… ಅಂತಾರೆ 40% ಆಧಾರದಲ್ಲಿ ವರ್ಗಾವಣೆ ಮಾಡೋ ಚಾಳಿ ಬಿಜೆಪಿ-ಜೆಡಿಎಸ್ ಮಾಡಿದ್ರು
ಸಿದ್ದರಾಮಯ್ಯ ಸರ್ಕಾರದಲ್ಲಿ ದುಡ್ಡು ತೆಗೆದುಕೊಂಡು ವರ್ಗಾವಣೆ ಮಾಡಿದ್ರೆ ಹೇಳಿ, ಹಣ ಪಡೆದು ವರ್ಗಾವಣೆ ಮಾಡಿದ್ರೆ ಇಷ್ಟೊಂತ್ತಿಗೆ ಹೊರಬರ್ತಿತ್ತು ಎಂದು ಲಕ್ಷ್ಮಣ್ ಹೇಳಿಕೆ ನೀಡಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!