May 1, 2024

MALNAD TV

HEART OF COFFEE CITY

 

1 min read

ಚಿಕ್ಕಮಗಳೂರು : ದಶಕಗಳ ಹೋರಾಟದ ಫಲವಾಗಿ ಚಿಕ್ಕಮಗಳೂರಿನ ಜನ 6 ವರ್ಷದ ಹಿಂದೆ ರೈಲು ನೋಡಿದ್ರು, ಇದೀಗ ನಷ್ಟದ ನೆಪವೊಡ್ಡಿ ದಶಕಗಳ ಹೋರಾಟದ ಬಳಿಕ ಕಾಫಿ ಕಣಿವೆಗೆ ಬಂದಿದ್ದ ರೈಲು ಶಾಶ್ವತವಾಗಿ ಬಂದ್ ಆಗಿರೋದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

1977 ಇಂದಿರಾಗಾಂಧಿಯಿಂದ ಆರಂಭವಾಗಿ 1998ರ ದೇವೇಗೌಡರ ಹೋರಾಟದ ಫಲವಾಗಿ 2014ರಲ್ಲಿ ಕಾಫಿನಾಡಿಗೆ ರೈಲು ಬಂದಿತ್ತು. ಆದ್ರೆ, ಆ ರೈಲು ಹಳಿ ಮೇಲೆ ಓಡ್ತೋ ವಿನಃ, ಜನರ ಬದುಕಿನಲ್ಲಿ ಓಡಲೇ ಇಲ್ಲ. ಎಲ್ಲರೂ ಮಲಗಿದ ಮೇಲೆ ರಾತ್ರಿ 9.30-10 ಗಂಟೆಗೆ ಬರೋದು. ಏಳುವ ಮುನ್ನವೇ ಹೋಗೋದು. ಜನ ಈ ರೈಲಿನ ಮೇಲೆ ಅವಲಂಬಿತರಾಗಿರಲಿಲ್ಲ. ಇದೀಗ ನಷ್ಟದ ನೆಪವೊಡ್ಡಿ ದಶಕಗಳ ಹೋರಾಟದ ಬಳಿಕ ಕಾಫಿ ಕಣಿವೆಗೆ ಬಂದಿದ್ದ ರೈಲು ಶಾಶ್ವತವಾಗಿ ಬಂದ್ ಆಗಿದೆ. ಇದೇ ನವೆಂಬರ್ 24ರಂದು ತನ್ನ ಓಟ ನಿಲ್ಲಿಸಿದೆ. ಈ ರೈಲನ್ನೇ ನಂಬಿಕೊಂಡಿದ್ದ ವರ್ಗ ಇದೀಗ ಕಂಗಾಲಾಗಿದೆ. ರೈಲುಗಳು ಇಲ್ಲದೇ ಚಿಕ್ಕಮಗಳೂರು ರೈಲು ನಿಲ್ದಾಣವೂ ಬಿಕೋ ಎನ್ನುತ್ತಿದೆ. ಅದೆಷ್ಟೋ ಬಾರಿ ಟೈಂ ಚೇಂಜ್ ಮಾಡಿ ಅಂತ ಪ್ರಯಾಣಿಕರು ಮನವಿ ಮಾಡಿದ್ರು ಸಂಬಂಧಪಟ್ಟ ಸಂಬಂಧವಿಲ್ಲದಂತಿದ್ರು. ಚಿಕ್ಕಮಗಳೂರಿಂದ ಬೆಂಗಳೂರು, ಹುಬ್ಬಳ್ಳಿ ಕಡೆ ಹೆಚ್ಚಿನ ಜನ ಓಡಾಡ್ತಾರೆ. ಹೀಗಾಗಿ ಎರಡು ಟ್ರೇನ್ ಬೆಂಗಳೂರು-ಹುಬ್ಬಳ್ಳಿ ಕಡೆಗೆ ರಾತ್ರಿ ಹೊರಡಬೇಕು ಹಾಗೆಯೇ ಬೆಂಗಳೂರು-ಹುಬ್ಬಳ್ಳಿ ಕಡೆಯಿಂದಲೂ ರಾತ್ರಿ ರೈಲು ಹೊರಟು ಚಿಕ್ಕಮಗಳೂರು ಕಡೆಗೆ ಬೆಳಗ್ಗೆ ಬರುವಂತಾಗಬೇಕು ಅಂತಾಲೂ ಅನೇಕರು ಸಲಹೆ ನೀಡಿದ್ರು. ಆದ್ರೆ, ಇದ್ಯಾವ್ದಕ್ಕೂ ಸೊಪ್ಪು ಹಾಕದೇ ಇದ್ದಿದ್ದರಿಂದ ಇದೀಗ ರೈಲು ಶಾಶ್ವತವಾಗಿ ಸ್ಪಾಪ್ ಆಗುವಂತಾಗಿದೆ.

 

 

ಒಂದ್ಕಡೆ ಪ್ಯಾಸೆಂಜರ್ ರೈಲಿನ ಮಾರ್ಗ-ಸಮಯದಲ್ಲಿ ಬದಲಾವಣೆ ಮಾಡಿಕೊಂಡ್ರೆ ಖಂಡಿತಾ ನಷ್ಟ ಉಂಟಾಗುವ ಪ್ರಮೇಯವೇ ಬರುತ್ತಿರಲಿಲ್ಲ. ಜೊತೆಗೆ ಕಾಫಿನಾಡು ಕೃಷಿಗಿಂತ ಹೆಚ್ಚಾಗಿ ವಾಣಿಜ್ಯ ಬೆಳೆಗಳ ಮೇಲೆ ಅವಲಂಬಿತವಾಗಿರೋ ಜಿಲ್ಲೆ. ವಾರ್ಷಿಕ ಸಾವಿರಾರು ಕೋಟಿಯ ಕಾಫಿ-ಅಡಿಕೆ-ಮೆಣಸು-ತೆಂಗಿನ ವಹಿವಾಟು ನಡೆಯುತ್ತೆ. ರೈಲ್ವೆ ಇಲಾಖೆ ಸಮರ್ಪಕವಾಗಿ ರೈಲನ್ನ ಬಿಟ್ಟಿದ್ದೇ ಆದಲ್ಲಿ ಗೂಡ್ಸ್ನಿಂದಲೂ ಕೂಡ ಸಾಕಷ್ಟು ಲಾಭ ಮಾಡಬಹುದು. ಬೆಳೆ-ರಸಗೊಬ್ಬರ ಸಾಗಾಟಕ್ಕೂ ಗೂಡ್ಸ್ ರೈಲು ಅನಿವಾರ್ಯವಿದೆ. ರೈಲಿನ ವ್ಯವಸ್ಥೆಯನ್ನೇ ಸರಿಯಾಗಿ ಕಲ್ಪಿಸದೇ ನಷ್ಟ ಅನ್ನೋದು ಸರಿಯಲ್ಲ. ಅತ್ತ ಪ್ಯಾಸೆಂಜರ್ ಇತ್ತ ಗೂಡ್ಸ್ ಎಲ್ಲಾ ರೀತಿಯಲ್ಲೂ ರೈಲುಗಳು ಓಡಾಡಿದ್ರೆ ನಷ್ಟದ ಮಾತೇ ಬರಲ್ಲ ಅಂತಿದ್ದಾರೆ ಜನ. ಉದ್ದಿಮೆಯಷ್ಟೆ ಅಲ್ಲದೆ ಕಾಫಿನಾಡು ಪ್ರವಾಸೋದ್ಯಮ ಜಿಲ್ಲೆ. ಪ್ಯಾಸೆಂಜರ್ ಹಾಗೂ ಇಂಟ್ರಸಿಟಿ ರೈಲುಗಳ ಓಡಾಟ ಹೆಚ್ಚಿದ್ರೆ ತಾನಾಗೆ ಆದಾಯ ಬರುತ್ತೆ. ಇಲಾಖೆ ಹೊತ್ತಲ್ಲದ ಹೊತ್ತಲ್ಲಿ ಟ್ರೈನ್ ಬಿಟ್ರೆ ನಷ್ಟವೇ ಆಗೋದು ಅಂತಿದ್ದಾರೆ ಜನರು.

ಒಟ್ಟಾರೆ, ಸರ್ಕಾರ ಜನ ಕೇಳುದ್ರು ಅಂತ್ಲೋ, ಇಂದಿರಾಗಾಂಧಿ ಹೇಳಿದ್ರು ಅಂತಲ್ಲೋ, ದೇವೇಗೌಡರು ಹೋರಾಡಿದ್ರು ಅಂತ ರೈಲನ್ನ ಕೊಡ್ತೋ ಏನೋ ಗೊತ್ತಿಲ್ಲ. ಆದ್ರೆ, ಕೊಟ್ಟಿದ್ದನ್ನ ಸಮರ್ಪಕವಾಗಿ ಕೊಡದೇ ನಷ್ಟವೆಂದು ಈಗ ಕ್ಲೋಸ್ ಮಾಡಿರೋದು ರೈಲನ್ನೇ ನಂಬಿಕೊಂಡಿದ್ದ ಜನರಿಗೆ ಸಮಸ್ಯೆಯಾಗಿದೆ. ಕೋಟಿ-ಕೋಟಿ ವೆಚ್ಚ ಮಾಡಿ ರೈಲು ಟ್ರ್ಯಾಕ್, ನಿಲ್ದಾಣ, ಮೂಲಭೂತ ಸೌಕರ್ಯವನ್ನ ಎಲ್ಲವನ್ನೂ ಮಾಡಿ ರೈಲು ಓಡಿಸಿಯೂ ಆಗಿದೆ. ಇದೀಗ ನಷ್ಟದ ನೆಪ್ಪವೊಡ್ಡಿ ಬಂದ್ ಮಾಡೋದು ಎಷ್ಟು ಸರಿ. ಕೂಡಲೇ ಕೆಲ ಮಾರ್ಪಾಡುಗಳನ್ನ ಮಾಡಿಕೊಂಡು ಮತ್ತೆ ರೈಲು ಸಂಚಾರವನ್ನ ಆರಂಭಿಸಲಿ ಅನ್ನೋದು ಕಾಫಿನಾಡಿನ ಜನರ ಆಗ್ರಹ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!