ಆಕಸ್ಮಿಕ ಬೆಂಕಿ: ರಾಗಿ ಬಣವೆ ಭಸ್ಮ
1 min readಚಿಕ್ಕಮಗಳೂರು: ಆಕಸ್ಮಿಕ ಬೆಂಕಿ ತುಗುಲಿ ಸಾವಿರಾರು ರೂಪಾಯಿ ಮೌಲ್ಯದ ರಾಗಿಯ ಹುಲ್ಲು ಬೆಂಕಿಗೆ ಆವುತಿಯಾಗಿರುವ ಘಟನೆ ತಾಲೂಕಿನ ಕುಮಕುನ್ನಾಳು ಗ್ರಾಮದಲ್ಲಿ ಸಂಭವಿಸಿದೆ.
ಗುರುವಾರ 12 ಗಂಟೆ ಸುಮಾರಿಗೆ ಏಕಾಏಕಿ ಸುಮಾರು 150 ಪೆಂಡಿಗಳಷ್ಟಿದ್ದ ರಾಗಿ ಹುಲ್ಲಿಗೆ ಬೆಂಕಿ ತಗುಲಿದೆ. ಕೂಡಲೇ ಸ್ಥಳೀಯರು ಬೆಂಕಿ ನಂದಿಸುವ ಪ್ರಯತ್ನ ಮಾಡಿದರು ಪ್ರಯೋಜನವಾಗದ ಪರಿಣಾಮ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಗ್ರಾಮದ ಚಂದ್ರಪ್ಪ ಎಂಬವರಿಗೆ ಸೇರಿದ ಬಣವೆ ಇದಾಗಿದ್ದು ರೈತ ಇತ್ತೀಚ್ಚೆಗೆ ಮನೆಯ ಜಾನುವಾರುಗಳಿಗೆ ಬೇರೆಡೆಯಿಂದ ತಂದು ಮನೆಯ ಹಿತ್ತಲಿನಲ್ಲಿ ಹುಲ್ಲನ್ನು ಶೇಖರಣೆ ಮಾಡಿದ್ರು.
ಬೆಂಕಿ ಕಾಣಿಸಕೊಂಡ ಬಳಿಕ ಅಗ್ನಿಶಾಮಕ ಸಿಬ್ಬಂದಿಗೆ ತಿಳಿಸದ್ದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ತೆರಳುವಷ್ಟರಲ್ಲಿ ಹುಲ್ಲು ಸಂಪೂರ್ಣ ಭಸ್ಮವಾಗಿದೆ. ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಬೇರೆಡೆ ಹರಡದಂತೆ ಸಂಪೂರ್ಣವಾಗಿ ನಂದಿಸಿ ಬಂದಿದ್ದಾರೆ. ಇನ್ನು ಜಾನುವಾರಿಗಳಿಗೆ ಸಾವಿರಾರು ರೂಪಾಯಿ ಕೊಟ್ಟು ತಂದಿದ್ದ ಹುಲ್ಲು ಬೆಂಕಿಯಲ್ಲಿ ಬೆಂದು ಹೋದ ಪರಿಣಾಮ ರೈತ ಕಂಗಾಲಾಗಿದ್ದಾರೆ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g