ಸಕಾರತ್ಮಕ ಸಲಹೆಗಳನ್ನು ಸ್ವೀಕರಿಸುತ್ತೇವೆ : ಶಾಸಕ ಸಿ.ಟಿ ರವಿ
1 min readಚಿಕ್ಕಮಗಳೂರು : ಪಾಸಿಟಿವ್ ಸಲಹೆಗಳನ್ನ ಸಕಾರಾತ್ಮಕವಾಗಿ ಸ್ವೀಕರಿಸುತ್ತೇವೆ. ಟೀಕೆಯನ್ನ ಕೊರೊನಾ ಎದುರಿಸಿದ ನಂತರ ವೈಫಲ್ಯಗಳನ್ನ ಬೆಟ್ಟು ಮಾಡಿ ತೋರಿಸಲಿ, ಬುದ್ದಿವಂತರಂತೆ ಮುಂಚೆಯೇ ತಿಳಿದಿತ್ತು ಎಂದು ಕೆಲವರು ಮಾತನಾಡ್ತಿದ್ದಾರೆ ಇದು ಸರಿಯಲ್ಲ ಎಂದು ಶಾಸಕ ಸಿ.ಟಿ. ರವಿ ಹೇಳಿದ್ರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕೊರೋನಾ ತಡೆಯುವಲ್ಲಿ ಸರ್ಕಾರವು ನಿಯಂತ್ರಣ ಹೇರಬೇಕೆಂಬ ಒತ್ತಡವನ್ನ ಯಾರೂ ಹಾಕಿಲ್ಲ, ವಿರೋಧ ಪಕ್ಷವೂ ಮಾಡ್ಲಿಲ್ಲ, ಮಾಧ್ಯಮವೂ ಮಾಡ್ಲಿಲ್ಲ, ರಾಜಕಾರಣಿಗಳು, ಮಾಧ್ಯಮ ಮಾಡಿದ್ದು ಬರೀ ಸಿಡಿ ಚರ್ಚೆ, ಕೋವಿಡ್ ಹೆಚ್ಚಾಗುತ್ತೆಂದು ತಜ್ಞರನ್ನ ಕರೆಸಿ ಎಜುಕೇಟ್ ಮಾಡುವ ಕೆಲಸವನ್ನ ಯಾರೂ ಮಾಡಿಲ್ಲ. ತಮಿಳುನಾಡಿನಲ್ಲಿ ಇದ್ದಾಗ ಘಟನೆಯನ್ನ ರಿಕಾಲ್ ಮಾಡ್ತಾ ಇದ್ದೀನಿ, ಈಗ ಹೇಳ್ತಿರೋದು ಸರ್ಕಾರದ ವೈಫಲ್ಯ ಅಂತ, ವಿಧಾನಸಭೆ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕರು ಹೇಳಲಿಲ್ಲ. ಅಂದು ಸಲಹೆ ನೀಡಿದ್ರೆ ಇಂದು ಆಪಾದನೆಗೂ ತಾಕತ್ತು ಬರ್ತಿತ್ತು. ಸಕಾರಾತ್ಮಕವಾಗಿ ಬರೋದನ್ನ ಅನುಷ್ಠಾನಗೊಳಿಸಿ, ಒಟ್ಟಾಗಿ ಎದುರಿಸಬೇಕು ಎಂದು ಹೇಳಿದ್ರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g