ಕ್ಷುಲ್ಲಕ ಕಾರಣಕ್ಕೆ ಕೆಎಸ್ ಆರ್ ಟಿಸಿ ಬಸ್ ಚಾಲಕನಿಂದ ಕಾರು ಚಾಲಕನಿಗೆ ಥಳಿತ
1 min read
ಚಿಕ್ಕಮಗಳೂರು: ಕೆಎಸ್ ಆರ್ ಟಿಸಿ ಬಸ್ ಚಾಲಕರೊಬ್ಬರು ಕಾರು ಚಾಲಕನಿಗೆ ಕ್ಷುಲ್ಲಕ ಕಾರಣಕ್ಕೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮೂಡಿಗೆರೆ ತಾಲ್ಲೂಕು ಕೊಟ್ಟಿಗೆಹಾರದಲ್ಲಿ ನಡೆದಿದೆ.
ತಿರುವಿನಲ್ಲಿ ಏಕೆ ಓವರ್ ಟೆಕ್ ಮಾಡ್ತೀರಾ ಎಂದು ಕಾರು ಚಾಲಕ ಬಸ್ ಚಾಲಕನಿಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕೆರಳಿದ ಬಸ್ ಚಾಲಕ ಕೊಟ್ಟಿಗೆಹಾರದಲ್ಲಿ ಬಸ್ ನಿಲ್ಲಿಸಿ ಕಾರು ಚಾಲಕನಿಗೆ ಥಳಿಸಿದ್ದಾರೆ.
ಬಸ್ ಚಾಲಕನ ದಾಳಿಗೆ ಕಾರು ಚಾಲಕನು ರಕ್ತದ ಮಡುವಿನಲ್ಲಿ ಬಿದ್ದಿದ್ದು, ಕ್ಷುಲ್ಲಕ ಕಾರಣಕ್ಕೆ ಇಬ್ಬರು ಚಾಲಕರು ಬಡಿದಾಡಿಕೊಂಡದ್ದಾರೆ.
ಚಾಲಕರ ನಡುವೆ ಒಂದು ಗಂಟೆಯ ವರೆಗೂ ಕಿತ್ತಾಟ ಮಾಡಿದ್ದು , ಇದನ್ನು ಕಂಡು ಸ್ಥಳೀಯರು ಶಾಕ್ ಆಗಿದ್ದಾರೆ.
ನಂತರ ಸ್ಥಳೀಯರು ಜಗಳ ಬಿಡಿಸಲು ಹೋಗಿದ್ದು, ಸ್ಥಳೀಯರ ಮಾತಿಗೂ ಬೆಲೆ ಕೊಡದ ಬಸ್ ಚಾಲಕ ಜಗಳ ಮಾಡಿದ್ದಾರೆ.
ಇಬ್ಬರ ಜಗಳ ಕಂಡು ಪ್ರಯಾಣಿಕರು ತಬ್ಬಿಬ್ಬಗಿದ್ದಾರೆ. ಅಷ್ಟೇ ಅಲ್ಲದೆ ಕಾರು ಚಾಲಕ ಪೊಲೀಸರಿಗೆ ದೂರು ನೀಡಲು ಮುಂದ್ದಾಗಿದ್ದಾನೆ. ಈ ಸಂಬಂಧ ಮೂಡಿಗೆರೆ ತಾಲೂಕು ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g