ಚಿಕ್ಕಮಗಳೂರಿನಲ್ಲಿ ಅ. 8 ರಂದು ಅದ್ದೂರಿ ಗಣಹೋಮ ಮತ್ತು ಅನ್ನಸಂತರ್ಪಣೆ
1 min readಚಿಕ್ಕಮಗಳೂರು : 87 ನೇ ವರ್ಷದ ಗಣೇಶೋತ್ಸವದ ಹಿನ್ನಲೆ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಗಣಪತಿ ಕೃಪೆಗೆ ಪಾತ್ರದಾರಿಗಳಾಗಬೇಕು ಎಂದು ಆಜಾದ್ ಪಾರ್ಕ್ ಗಣಪತಿ ಸೇವಾ ಸಮಿತಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಹೇಳಿದರು.
ಮಲ್ನಾಡ್ ಟಿ.ವಿ. ವರದಿಗಾರೊಂದಿಗೆ ಮಾತನಾಡಿದ ಅವರು ಇದೆ ತಿಂಗಳ 8 ನೇ ತಾರೀಕು ಗಣಹೋಮ ಮತ್ತು ಅನ್ನಸಂತರ್ಪಣೆ ಇದೆ. ಅಕ್ಟೋಬರ್ 9 ನೇ ತಾರೀಕು 8 ಗಂಟೆಗೆ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗು ಭಜನೆ, 10 ನೇ ತಾರೀಕು ಲೋಕನಾಥ್ ಸಂಗಡಿಗರಿಂದ ಆರ್ಕೆಸ್ಟ್ರಾವನ್ನು ಆಯೋಜಿಸಿದ್ದು, ನಂತರ ಅಕ್ಟೋಬರ್ 11 ರಂದು ಶ್ರೀ ಸ್ವಾಮಿಯವರನ್ನು ಅಲಂಕೃತ ವಾಹನದಲ್ಲಿ ನಗರದ ಮುಖ್ಯ ಬೀದಿಯಲ್ಲಿ ಸಂಚರಿಸಿ ಕೋಟೆಯ ಕಲ್ಯಾಣಿಯಲ್ಲಿ ಸ್ವಾಮಿಯ ವಿಸರ್ಜನೆಯನ್ನು ಮಾಡಲಿದ್ದು ಎಲ್ಲ ಸಾರ್ವಜನಿಕರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g