May 17, 2024

MALNAD TV

HEART OF COFFEE CITY

ಕಾಫಿನಾಡಲ್ಲೊಂದು ಹೇಳಿದ ಮಾತು ಕೇಳುವ ಕಾಡಾನೆ ಮರಿ

1 min read

 

 

ಕಾಡಾನೆ ಅಂದ್ರೆ ರೆಬಲ್, ವೈಲೆಂಟ್, ದಾಂಧಲೆ. ಆದ್ರೆ, ಚಿಕ್ಕಮಗಳೂರು-ಹಾಸನ ಜಿಲ್ಲೆಯ ಮೂಡಿಗೆರೆ-ಬೇಲೂರು ತಾಲೂಕಿನ ಗಡಿ ಚೀಕನಹಳ್ಳಿ ಬಳಿ ಮರಿ ಕಾಡಾನೆಯೊಂದು ಮಕ್ಕಳಂತೆ ಬಾ ಅಂದ್ರೆ ಬರುತ್ತೆ. ಹೋಗು ಅಂದ್ರೆ ಹೋಗುತ್ತೆ. ಕಾಡಾನೆ ಗುಂಪಿನಿಂದ ಬೇರ್ಪಟ್ಟ ಮರಿ ಕಾಡಾನೆಯೊಂದು ಅಮ್ಮನನ್ನ ಕಳ್ಕೊಂಡು ಅನಾಥವಾಗಿ ಕಾಫಿನಾಡ ಕಾಫಿತೋಟದಲ್ಲಿ ಅತ್ತಿಂದಿತ್ತ ಓಡಾಡ್ಕೊಂಡು ಅಮ್ಮನನ್ನ ಹುಡುಕುತ್ತಿತ್ತು. ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡನ್ನ ಕಂಡು ಸ್ಥಳೀಯರು ಪಟಾಕಿ ಸಿಡಿಸಿದರಿಂದ ಓಡುವ ಧಾವಂತದಲ್ಲಿ ಮರಿ ಕಾಡಾನೆ ಕಾಫಿ ತೋಟದಲ್ಲಿ ದಾರಿ ತಪ್ಪಿದೆ. ಪಟಾಕಿ ಶಬ್ಧಕ್ಕೆ ಕಾಡಾನೆಗಳ ಹಿಂಡು ಬೇರೆಡೆ ಓಡಿಹೋಗಿವೆ. ಆದರೆ, ತೋಟದಲ್ಲಿ ದಾರಿ ತಪ್ಪಿದ ಕಾಡಾನೆ ಮರಿ ಕಾಫಿ ತೋಟದಲ್ಲಿ ಉಳಿದುಕೊಂಡಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಮರಿ ಆನೆಗೆ ನೀರು ಕುಡಿಸಿ ಸಂತೈಸಿದ್ದಾರೆ.‌ ಮರಿ ಆನೆಯನ್ನು ತಾಯಿಯ ಜೊತೆ ಬಿಡಲು ಅರಣ್ಯ ಅಧಿಕಾರಿಗಳು ಕೂಡ ಪೇಚಿಗೆ ಸಿಲುಕಿದ್ದಾರೆ. ಏಕೆಂದರೆ, ಕಾಡಾನೆಗಳ ಹಿಂಡಲ್ಲಿ ಆನೆ ತಪ್ಪಿಸಿಕೊಂಡರೆ ಆ ಕಾಡಾನೆಗಳ ಹಿಂಡು ಮತ್ತೆ ಆನೆಯನ್ನು ಜೊತೆಗೆ ಸೇರಿಸಿಕೊಳ್ಳುವುದಿಲ್ಲ. ಹಾಗಾಗಿ, ಮರಿ ಕಾಡಾನೆಯನ್ನು ಹೇಗೆ ತಾಯಿಯ ಬಳಿ ಬಿಡುವುದು ಎಂದು ಅಧಿಕಾರಿಗಳು ಕೂಡ ತಲೆಕೆಡಿಸಿಕೊಂಡಿದ್ದಾರೆ. ಈ ಮಧ್ಯೆ, ಕಾಡಾನೆಗಳ ಹಿಂಡು ಬೇಲೂರು ಅರಣ್ಯ ಪ್ರದೇಶ ಪ್ರವೇಶಿಸಿರುವ ಶಂಕೆಯಿಂದ ಮರಿ ಕಾಡಾನೆಯನ್ನು ಬೇಲೂರು ಅರಣ್ಯ ಪ್ರದೇಶಕ್ಕೆ ಬಿಡಲು ಅಧಿಕಾರಿಗಳು ಆನೆಮರಿಯನ್ನು ಕೊಂಡೊಯ್ದಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!