ಇಸ್ಕಾನ್ ನಿಂದ 3 ನೇ ಬಾರಿ ಶ್ರೀ ಕೃಷ್ಣ ಜನ್ಮಾಷ್ಠಮಿ
1 min readಚಿಕ್ಕಮಗಳೂರು : ಎಲ್ಲರಲ್ಲೂ ಸುಪ್ತವಾಗಿರುವ ಕೃಷ್ಣ ಭಾವನೆಯನ್ನು ಜಾಗೃತಗೊಳಿಸಲು ಆಗಸ್ಟ್ 19 ರಂದು ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹರೇ ಕೃಷ್ಣ ಪ್ರಚಾರ ಕೇಂದ್ರದ ಮುಖ್ಯಸ್ಥರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಲ್ಲರಲ್ಲೂ ಸುಪ್ತವಾಗಿರುವ ಕೃಷ್ಣ ಭಾವನೆಯನ್ನು ಜಾಗೃತಗೊಳಿಸಲು ಇಸ್ಕಾನ್ ವತಿಯಿಂದ ಚಿಕ್ಕಮಗಳೂರಿನಲ್ಲಿ 3 ನೇ ಬಾರಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಿದ್ದು, ಈ ಬಾರಿಯ ಶ್ರೀ ಕೃಷ್ಣ ಜನ್ಮಾಷ್ಠಮಿ ಮಹಾ ಮಹೋತ್ಸವದ ಆಗಸ್ಟ್ 19 ರಂದು ಸಂಜೆ 5-30 ರಿಂದ ಕೀರ್ತನೆ ಹಾಗೂ ಭಜನೆ, ಪ್ರವಚನ, ಮಹಾಮಂಗಳಾರತಿ ಹಾಗು ಮಹಾ ಪ್ರಸಾದ ವಿನಿಯೋಗವಿರುತ್ತದೆ. ಶನಿವಾರ ಬೆಳಗ್ಗೆ 10-30 ರಿಂದ ಕೀರ್ತನೆ ಹಾಗೂ ಭಜನೆ, ಪ್ರವಚನ, ಪುಷ್ಪಾಂಜಲಿ ಹಾಗೂ ಆರತಿ, ಮಹಾಪ್ರಸಾದವಿರುತ್ತದೆ. ಈ ಎಲ್ಲಾ ಕಾರ್ಯಕ್ರಮವನ್ನು ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ, ಓಂಕಾರೇಶ್ವರ ದೇವಸ್ಥಾನದ ಮುಂಭಾಗವಿರುವ ಬ್ರಹ್ಮ ಸಮುದ್ರ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ನಡೆಸಲಾಗುವುದೆಂದು ಹೇಳಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g