3 ಸಾವಿರ ಲಂಚ ಪಡೆಯುವಾಗ ಆರ್.ಟಿ.ಓ. ಅಟೆಂಡರ್ ಲೋಕಾ ಬಲೆಗೆ
1 min readಬೈಕಿಗೆ ಪರವಾನಗಿ ಮಾಡಿ ಕೊಡಲು ಎಂಟು ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರ್.ಟಿ.ಓ. ಹಾಗೂ ಆರ್.ಟಿ.ಓ ಅಟೆಂಡರ್ ಲೋಕಾಯುಕ್ತ ಪೊಲೀಸರ ಅತಿಥಿಯಾಗಿರುವ ಘಟನೆ ಚಿಕ್ಕಮಗಳೂರು ಆರ್.ಟಿ.ಓ. ಕಚೇರಿಯಲ್ಲಿ ನಡೆದಿದೆ. ಆರ್.ಟಿ.ಓ. ಅಟೆಂಡರ್ ಲತಾ ಹಾಗೂ ಆರ್.ಟಿ.ಓ. ಅಧಿಕಾರಿ ಮಧುರಾ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು ನಗರದ ಕೆಂಪನಹಳ್ಳಿ ನಿವಾಸಿಯೊಬ್ಬರು ರೆಂಟೆಡ್ ಬೈಕ್ ವೃತ್ತಿ ಆರಂಭಿಸಿದ್ದರು. ರೆಂಟೆಡ್ ಬೈಕ್ಗಳು ರಾಜ್ಯಾದ್ಯಂತ ಓಡಾಡುವಂತೆ ಅನುಮತಿ ನೀಡುವಂತೆ ಆರ್.ಟಿ.ಓ.ಗೆ ಮನವಿ ಮಾಡಿದ್ದರು. ಒಂದು ಬೈಕಿಗೆ 500 ರೂಪಾಯಿ ಸರ್ಕಾರಿ ಫೀಸ್ ನಂತೆ 4000 ಹಣ ಕಟ್ಟಿ ಎಂಟು ಬೈಕಿಗೆ ಹಣ ಕಟ್ಟಿದ್ದರು. ಆದರೆ. ಆರ್.ಟಿ.ಓ. ಫೈಲ್ ಪೆಂಡಿಂಗ್ ಇಟ್ಟಿದ್ದರು. ಎರಡ್ಮೂರು ಬಾರಿ ಕಚೇರಿಗೆ ಅಲೆದ ರೆಂಟೆಡ್ ಬೈಕ್ ಶಾಪ್ ಓನರ್ ಅಟೆಂಡರ್ ಬಳಿ ಕೇಳಿದಾಗ, ಮೇಡಂ ಕೇಳುತ್ತೇನೆ ಎಂದು ಕೇಳಿ ಒಂದು ಬೈಕಿಗೆ ಒಂದು ರೂಪಾಯಿಯಂತೆ ಎಂಟು ಸಾವಿರ ಕೊಡಬೇಕೆಂದು ಮೇಡಂ ಕೇಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಅದರಂತೆ, ಮುಂಗಡವಾಗಿ 2 ಸಾವಿರ ಹಣ ನೀಡಿ ಮತ್ತೆ ಮೂರು ಸಾವಿರ ಹಣ ನೀಡುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಅಟೆಂಡರ್ ಲತಾರನ್ನ ವಶಕ್ಕೆ ಪಡೆದಿದ್ದಾರೆ. ಅಟೆಂಡರ್ ಲತಾ ಎ1 ಹಾಗೂ ಆರ್.ಟಿ.ಓ. ಮಧುರಾ ಎ2 ಆಗಿ ಪ್ರಕರಣ ದಾಖಲಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g