May 6, 2024

MALNAD TV

HEART OF COFFEE CITY

ಕಡೂರು ಗಡಿ ಚೆಕ್ ಪೋಸ್ಟ್ ನಲ್ಲಿ 20 ಲಕ್ಷ ಹಣ ಸೀಜ್

1 min read

ಚುನಾವಣೆ ಸಂಬಂಧ ಜಿಲ್ಲೆಯ ಗಡಿಭಾಗದಲ್ಲಿ ತೆರೆದಿರುವ ಚೆಕ್ ಪೋಸ್ಟ್ ಗಳಲ್ಲಿ ನಿತ್ಯ ದಾಖಲೆ ಇಲ್ಲದ ಹಣ ಹಾಗೂ ಇತರೆ ವಸ್ತುಗಳು ಸಿಗುತ್ತಲೇ ಇವೆ. ಕಡೂರಿನ ಚೌಡಿಪಾಳ್ಯ ಬಳಿ ಇಂದು ಬರೋಬ್ಬರಿ 20 ಲಕ್ಷ ಹಣ ಓಮ್ನಿ ವಾಹನದಲ್ಲಿ ಕೊಂಡುಯ್ಯುವಾಗ ವಶಪಡಿಸಿಕೊಳ್ಳಲಾಗಿದೆ. ಕೆನರಾ ಬ್ಯಾಂಕ್ ಗೆ ಸೇರಿದ ಹಣ ಎಂದು ಹೇಳಲಾಗುತ್ತಿದ್ದರೂ ಓಮ್ನಿ ವಾಹನ ನಂಬರ್ ಪ್ಲೇಟ್ ಬದಲಿಸಿರುವುದು ಏಕೆ ಎಂಬ ಪ್ರಶ್ನೆ ಮೂಡಿದೆ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಎಲ್ಲೆಡೆ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು ಜಿಲ್ಲೆಯ ಗಡಿಭಾಗದಲ್ಲಿ ಮತ್ತಷ್ಟು ತಪಾಸಣೆ ಹೆಚ್ಚಿಸಲಾಗಿದೆ. ಕಡೂರು ತಾಲೂಕಿನ ಪಂಚನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಚೌಡಿಪಾಳ್ಯ ಚೆಕ್ ಪೋಸ್ಟ್ ನಲ್ಲಿ ಇಂದು ದಾಖಲೆ ಸರಿ ಇಲ್ಲದ 20 ಲಕ್ಷ ಹಣವನ್ನು ಸೀಜ್ ಮಾಡಲಾಗಿದೆ. ಪಂಚನಹಳ್ಳಿ ಕೆನರಾ ಬ್ಯಾಂಕ್ ನಿಂದ ಹಿರಿಯೂರಿನ ಡಿ.ಎಂ ಕುರ್ಕೆಗೆ KA 13 B 7602 ಓಮ್ನಿ ವಾಹನದಲ್ಲಿ ತೆಗೆದುಕೊಂಡು ಹೋಗಲಾಗತಿತ್ತು. ಆದರೆ ಓಮ್ನಿ ವಾಹನದಲ್ಲಿ ಏಕೆ ಮತ್ತು ಯಾವುದೇ ಗನ್ ಮ್ಯಾನ್ ಇಲ್ಲದೇ ಹಣ ಕೊಂಡೋಯ್ಯುತ್ತಿದ್ದುದು ಏಕೆ ಎಂಬ ಪ್ರಶ್ನೆ ಮೂಡಿದೆ. ಈ ನಡುವೆ ತಪಾಸಣೆ ವೇಳೆ ಓಮ್ನಿ ವಾಹನದ ನಂಬರ್ ಬದಲಾಗಿರುವುದು ಕಂಡು ಬಂದಿದೆ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!