161 ಕೆ.ಜಿ. 700 ಗ್ರಾಂ. ರಕ್ತ ಚಂದನ ಮರದ 3 ದಿಮ್ಮಿ ವಶ
1 min readಅಕ್ರಮವಾಗಿ ರಕ್ತ ಚಂದನ ಮರದ ದಿಮ್ಮಿ ಸಾಗುವ ವೇಳೆ ಚಿಕ್ಕಮಗಳೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳ ದಾಳಿ ಮಾಡಿ 161 ಕೆ.ಜಿ. 700 ಗ್ರಾಂ ರಕ್ತ ಚಂದನ ಮರದ 3 ದಿಮ್ಮಿ ವಶಕ್ಕೆ ಪಡೆಸಿಕೊಂಡಿರೋ ಘಟನೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಕನಮರಡಿ ಗ್ರಾಮದ ವಿಶ್ವೇಶ್ವರಯ್ಯ ಅತ್ಕಲ್ ಕಾಲುವೆ ಬಳಿ ನಡೆದಿದೆ.
ಪೊಲೀಸ್ ಮಹಾ ನಿರೀಕ್ಷಕರು ಸಿಐಡಿ ಅರಣ್ಯ ಘಟಕ ಬೆಂಗಳೂರು ಇವರ ಮಾರ್ಗ ದರ್ಶನದಂತೆ ಚಿಕ್ಕಮಗಳೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳ ದಾಳಿ ನಡೆಸಿದೆ. ದಾಳಿ ವೇಳೆ ಆರೋಪಿಗಳಾದ ಯಶ್ವಂತ್, ಕೃಷ್ಣಮೂರ್ತಿ, ರವಿ, ಅಭಿ, ಗಣೇಶ್, ಶ್ರವಣ ಪರಾರಿಯಾಗಿದ್ದು. ಇಬ್ಬರು ರೋಪಿಗಳನ್ನ ವಶಕ್ಕೆ ಪಡೆಯಲಾಗಿದೆ. ದಾಳಿಯ ವೇಳೆ 161 ಕೆ.ಜಿ. 700 ಗ್ರಾಮ್ ರಕ್ತ ಚಂದನ ಮರದ 3 ದಿಮ್ಮಿ ಸುಮಾರು 16.10.000 ರೂಪಾಯಿ ಮೌಲ್ಯದ ಮರವನ್ನು ವಶಕ್ಕೆ ಪಡೆಯಲಾಗಿದೆ, ಕನೂನು ಕ್ರಮಕ್ಕೆ ಪಾಂಡವಪುರ ವಲಯ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g