April 29, 2024

MALNAD TV

HEART OF COFFEE CITY

ದತ್ತಪೀಠ ವಿವಾದ ಕೂಲಂಕುಷ ಪರಿಶೀಲನೆಗೆ ಒತ್ತಾಯ

1 min read

 

ಚಿಕ್ಕಮಗಳೂರು: ಗುರುದತ್ತಾತ್ರೇಯ ಬಾಬಾ ಬುಡನ್ ದರ್ಗಾದ ಹೆಸರನ್ನು ಪಠ್ಯ ಪುಸ್ತಕಗಳಲ್ಲಿ ದತ್ತಪೀಠ ಎಂದು ಬದಲಾಯಿಸಲು ಹೊರಟಿರುವುದನ್ನು ಖಂಡಿಸಿ ಯಾವುದೇ ಕಾರಣಕ್ಕೂ ಹೆಸರು ಬದಲಾಯಿಸಬಾರದಾಗಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ರಾಜ್ಯ ಕಾರ್ಯದರ್ಶಿ ಗೌಸ್ ಮೋಹಿಯುದ್ದೀನ್ ಆಗ್ರಹಿಸಿದರು.

ನಗರದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಸುಮಾರು ಎರಡು ದಶಕಗಳಿಂದ ಕರ್ನಾಟಕವನ್ನು ಗುಜರಾತ್ ಮಾಡುತ್ತೇವೆಂದು ಶ್ರೀ ಗುರುದತ್ತಾತ್ರೇಯ ಬಾಬಾ ಬುಡನ್ ದರ್ಗಾವನ್ನು ದಕ್ಷಿಣದ ಅಯೋಧ್ಯೆ ಮಾಡುತ್ತೇವೆಂದು ಹೊರಟಿರುವ ಸಂಘ ಪರಿವಾರದ ಪರವಾಗಿ ಪರೋಕ್ಷವಾಗಿ ಸರ್ಕಾರ ಬೆಂಬಲಿಸುತ್ತಿದೆ. ಇತ್ತೀಚೆಗೆ ಈ ವಿವಾದದ ಬಗ್ಗೆ ಉಚ್ಛ ನ್ಯಾಯಾಲಯದ ಆದೇಶದಲ್ಲೂ ಕೂಡ ದರ್ಗಾ ಅಲ್ಲ ದತ್ತಪೀಠ ಎಂಬುದಾಗಿ ತೀರ್ಮಾನವಾಗಿಲ್ಲ . ಈ ಹಿನ್ನೆಲೆ ಸರ್ಕಾರ ಇತಿಹಾಸದ ಬಗ್ಗೆ ಇನ್ನೊಮ್ಮೆ ಕೂಲಂಕುಷ ವಿಚಾರ ಮಾಡಿಬೇಕು ಎಂದು ಆಗ್ರಹಿಸಿದ ಅವರು ಹಿಂದಿನಂತೆ ಎಲ್ಲಾ ಕಾರ್ಯಗಳು ನಡೆದುಕೊಂಡು ಹೋಗಬೇಕು ಹಾಗೂ ಮುಕ್ತವಾಗಿ ಎಲ್ಲರಿಗೂ ಅವಕಾಶ ನೀಡಬೇಕೆಂದು ಆಗ್ರಹಿಸಿದರು

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!