May 19, 2024

MALNAD TV

HEART OF COFFEE CITY

ಕುಂದೂರು ಅರಣ್ಯದಲ್ಲಿ ಕಾಡಾನೆ ಸೆರೆ : ಉಪಟಳ ನೀಡುತ್ತಿದ್ದ ಆನೆ ಇದೇನಾ ?

1 min read

 

ಇಬ್ಬರನ್ನು ಬಲಿಪಡೆದಿದ್ದ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಕಳೆದ ರಾತ್ರಿ ಆನೆಯೊಂದನ್ನು ಹಿಡಿಯಲಾಗಿದ್ದು ಇದು ಉಪಟಳ ನೀಡುತ್ತಿದ್ದ ಆನೆಯೇ ಎಂಬ ಪ್ರಶ್ನೆ ಮೂಡಿದೆ.

ಮೂಡಿಗೆರೆಯ ಕುಂದೂರು ಸಮೀಪ ಈ ಕಾಡಾನೆ ಸೆರೆಹಿಡಿಯಲಾಗಿದೆ ಆದರೆ ಕಿಲ್ಲರ್ ಸಲಗ ಬಿಟ್ಟು ಬೇರೆ ಆನೆಯನ್ನು ಹಿಡಿಯಲಾಗಿದೆಯೇ ಎಂಬ ಅನುಮಾನ ಕಾಡತೊಡಗಿದೆ.
ತಡರಾತ್ರಿವರೆಗೂ ನಡೆದ ಕಾಡಾನೆ ಸೆರೆ ಕಾರ್ಯಚರಣೆ ವೇಳೆ ಆನೆಯನ್ನು ಹಿಡಿಯಲಾಗಿದೆ. ಕುಂದೂರು ಸಮೀಪ ಅರವಳಿಕೆ ಚುಚ್ಚು ಮದ್ದು ನೀಡಿ ಅರಣ್ಯ ಇಲಾಖೆ ಆನೆ ಸೆರೆಹಿಡಿದಿದೆ.
ನಿನ್ನೆ ಮಧ್ಯಾಹ್ನ ಕುಂದೂರು ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆ ಬೆನ್ನು ಹತ್ತಿದ್ದ ಸಿಬ್ಬಂದಿಗೆ ಈ ಆನೆ ಸಿಕ್ಕಿದೆ, ನಿರಂತರ ಕಾರ್ಯಾಚರಣೆ ಬಳಿಕ ತಡರಾತ್ರಿ ಸೆರೆಯಾದ ಒಂಟಿ ಸಲಗ ಯಾವುದು ಎಂಬ ಕುತೂಹಲ ಮೂಡಿದೆ.
ಇಬ್ಬರನ್ನ ಕೊಂದ ಒಂಟಿ ಸಲಗ ಬಿಟ್ಟು ಬೇರೆ ಆನೆ ಸೆರೆ ಹಿಡಿದಿರೋ ಆರೋಪ ಸಹಾ ಇದೀಗ ಅರಣ್ಯ ವಿರುದ್ಧ ಕೇಳಿ ಬಂದಿದೆ.
ಸೆರೆಯಾದ ಕಾಡಾನೆ ಯಾವ್ದುಎಂದು ಸ್ಪಷ್ಟನೆ ಅರಣ್ಯ ಇಲಾಖೆ ನೀಡದಿರುದೇ ಇದಕ್ಕೆ ಕಾರಣವಾಗಿದೆ
ಇನ್ನು ಸಹಾ ಕಾರ್ಯಚರಣೆ ಮುಂದುವರೆಸಲಿರುವ ಅರಣ್ಯ ಇಲಾಖೆ ಬೇರೆ ಕಾಡಾನೆ ಸೆರೆಗೆ ಮುಂದಾಗಿದೆ. ಮಹಿಳೆ ಬಲಿಯಾದ ಕೂಡಲೇ ಆನೆ ಸೆರೆಗೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದರು. ಈ ನಡುವೆ ಕುಂದೂರು ಸುತ್ತಮುತ್ತ ನಿಷೇದಾಜ್ಣೆ ಮುಂದುವೆರೆಸಲಾಗಿದೆ.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!