ನೈರುತ್ಯ ಶಿಕ್ಷಕರ, ಪದವೀಧರ ಕ್ಷೇತ್ರದ ಮತದಾರರ ಕರಡು ಪ್ರತಿ ಇಂದು ಪ್ರಕಟ : ಡಿ.ಸಿ ಮೀನಾ ನಾಗರಾಜ್
1 min readಚಿಕ್ಕಮಗಳೂರು: ನೈರುತ್ಯ ಶಿಕ್ಷಕರ ಕ್ಷೇತ್ರದ ಮತ್ತು ಪದವೀಧರ ಕ್ಷೇತ್ರದ ಮತದಾರರ ಕರಡು ಪ್ರತಿಯನ್ನು ಇಂದು ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಾತಾನಾಡಿದ ಅವರು ಮತದಾರರ ಪಟ್ಟಿ ಬಗ್ಗೆ ಅಕ್ಷಪಣೆ ಇದ್ದವರು ಡಿಸೇಂಬರ್ 9 ರ ವರೆಗೂ ಅಕ್ಷಪಣೆ ಅರ್ಜಿ ಸಲ್ಲಿಸಬಹುದು ತಿಳಿಸಿದ್ದಾರೆ.
ಇದುವರೆಗೂ ಪದವೀಧರರ ಕ್ಷೇತ್ರಕ್ಕೆ 8 ತಾಲ್ಲೂಕು ಗಳಿಂದ 8390 ಮತ್ತು ಶಿಕ್ಷಕರ ಕ್ಷೇತ್ರದಿಂದ 3351 ಅರ್ಜಿಗಳು ಸಲ್ಲಿಕೆಯಗಿವೆ. ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. 2 ಕ್ಷೇತ್ರಗಳ ಮತದಾರರ ಅಂತಿಮ ಪಟ್ಟಿಯನ್ನು ಡಿಸೇಂಬರ್ 30ಕ್ಕೆ ಪ್ರಕಟಿಸಲಾಗುವದು ಎಂದು ತಿಳಿಸಿದ ಅವರು ಮತದಾರರು ಪಟ್ಟಿ ಕುರಿತು ಕರಡು ಪ್ರತಿಯನ್ನು ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರಿಗೂ ವಿತರಿಸಲಾಗುವುದು ಇಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆಯನ್ನು ನೆಡೆಸುತ್ತಿದ್ದೂ ಅವರಿಂದ ಯಾವುದೇ ಅಕ್ಷಪಣೆ ಅಥವಾ ದೂರು ಬಂದಲ್ಲಿ ಆ ಬಗ್ಗೆಯೂ ಚರ್ಚಿಸಿ ತೀರ್ಮಾನ ಕೈ ಗೊಳ್ಳಲಾಗುವುದು ಎಂದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g