ಗ್ರಾಮಗಳಲ್ಲಿ ಕೇವಲ ದೇವಾಲಯ ನಿರ್ಮಿಸಿದರೆ ಸಾಲದು, ನಿರ್ವಹಣೆ ಅಗತ್ಯ; ಎ.ವಿ ಗಾಯತ್ರಿ ಶಾಂತೇಗೌಡ
1 min readಚಿಕ್ಕಮಗಳೂರು: ಗ್ರಾಮಗಳಲ್ಲಿ ಕೇವಲ ದೇವಾಲಯ ನಿರ್ಮಿಸಿದರೆ ಸಾಲದು, ಮನೆಗೆ ಒಬ್ಬರಂತೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದರೆ ಮಾತ್ರ ದೇವಸ್ಥಾನ ಆವರಣವು ಸ್ವಚ್ಚವಾಗಿರಲು ಸಾಧ್ಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ ಹೇಳಿದರು.
ಮತ್ತಾವರ ಗ್ರಾಮದಲ್ಲಿ ಕೆಂಚರಾಯಸ್ವಾಮಿ ನೂತನ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಮಾರಂಭ ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಹೆಚ್.ಹೆಚ್.ದೇವರಾಜ್ ಮತ್ತಾವರದಲ್ಲಿ ದಲಿತ ಸಮುದಾಯ ಅತ್ಯಂತ ಶಕ್ತಿಯುತವಾಗಿದೆ. ಇದರಿಂದ ಎಲ್ಲಾ ಜನಾಂಗವನ್ನು ವಿಶ್ವಾಸಗಳಿಸಿಕೊಂಡು ದೇವಾಲಯ ನಿರ್ಮಿಸಿರುವುದು ಒಳ್ಳೆಯ ಸಂಗತಿ ಎಂದರು. ಚಿತ್ರದುರ್ಗ ಮಹಾಸಂಸ್ಥಾನ ಮಠದ ಶ್ರೀ ಬಸವನಾಗಿದೇವ ಶರಣರು ಆಶೀರ್ವಚನ ನೀಡಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g