ಕಾಡಾನೆ ದಾಳಿ ಟಾಸ್ಕ್ ಫೋರ್ಸ್ ಸಿಬ್ಬಂದಿ ಸಾವು: ಜಿಲ್ಲೆಯಿಂದ ಆನೆ ಸ್ಥಳಾಂತರಕ್ಕೆ ಚಿಂತನೆ ಡಿ.ಸಿ
1 min readಚಿಕ್ಕಮಗಳೂರು: ಟಾಸ್ಕ್ ಫೋರ್ಸ್ ಸಿಬ್ಬಂದಿಯೇ ಕಾಡಾನೆ ದಾಳಿಗೆ ಬಲಿಯಾದ ಪ್ರಕರಣದ ಬಗ್ಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಪ್ರತಿಕ್ರಿಯಿಸಿದ್ದಾರೆ.
ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಹೋದಾಗ ಯುವ ಸಿಬ್ಬಂದಿ ಕಾರ್ತಿಕ್ ಮೃತಪಟ್ಟಿರುವುದು ದುರಾದೃಷ್ಟಕರ ಜಿಲ್ಲೆಯಲ್ಲಿ 34 ಆನೆಗಳಿದ್ದು ಅವುಗಳಿಗೆ ರೆಡಿಯೋ ಕಾಲರ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ಕಾಡಾನೆಗಳಿಗೆ ಆಹಾರದ ಕೊರತೆಯಿಂದ ಜನವಸತಿ ಪ್ರದೇಶಗಳಿಗೆ ಆಗಮಿಸುತ್ತಿವೆ. ಕಾಡಾನೆಗಳನ್ನು ಜಿಲ್ಲೆಯಿಂದ ಹೊರಗೆ ಸ್ಥಳಾಂತರ ಮಾಡುವ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಪಕ್ಕದ ಹಾಸನ ಜಿಲ್ಲೆಯಿಂದ ಬರುತ್ತಿರುವ ಆನೆಗಳಿಂದಲೂ ಉಪಟಳ ಹೆಚ್ಚುತ್ತಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿ ನಮ್ಮಲ್ಲಿ ಇರುವ ಅರಣ್ಯ ಪ್ರದೇಶ 34 ಆನೆಗಳ ಓಡಾಟಕ್ಕೆ ಸಾಲುತ್ತಿಲ್ಲ ಆನೆಗಳು ಇರುವ ಸಂಖ್ಯೆಗೆ ಅನುಗುಣವಾಗಿ ಅವುಗಳು ಓಡಾಡಲು ಬೇಕಾದ ಅರಣ್ಯ ವ್ಯಾಪ್ತಿಯನ್ನು ಮೀರಿರುವುದೇ ಘಟನೆಗೆ ಕಾರಣ ಎಂದರು. ಕಾಡಾನೆಗಳ ಓಡಾಟ ವ್ಯಾಪ್ತಿಯಲ್ಲಿ ಫೆನ್ಸಿಂಗ್ ಅಳವಡಿಕೆ ಸಹಾ ನಡೆಯುತ್ತಿದೆ ಎಂದು ಮೀನಾ ನಾಗರಾಜ್ ತಿಳಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g