May 6, 2024

MALNAD TV

HEART OF COFFEE CITY

ನದಿ ದಾಟಲು ಹಗ್ಗ ಕಟ್ಟಿ ಜೀವ ಪಣಕ್ಕಿಡುವ ಗ್ರಾಮಸ್ಥರು

1 min read

ಚಿಕ್ಕಮಗಳೂರು : ಚುನಾವಣೆ ಸಮಯದಲ್ಲಿ ಆಕಾಶವನ್ನೆ ಧರೆಗಿಳಿಸುವ ರಾಜಕಾರಣಿಗಳು ಚುನಾವಣೆ ನಂತರ ಕೊಟ್ಟ ಮಾತನ್ನು ಮರೆತು, ಜನರ ಸಮಸ್ಯೆಗೂ ನಮಗೂ ಸಂಬಂಧವಿಲ್ಲದಂತೆ ಕಿವುಡರಾಗಿ ಬಿಡುತ್ತಾರೆ. ಮತ ಹಾಕಿದ ಮತದಾರ ಮಾತ್ರ ಜಾತಕ ಪಕ್ಷಿಯಂತೆ ಕೊಟ್ಟ ಭರವಸೆಯನ್ನು ಈಡೇರಿಸುತ್ತಾರೆಂದು ಅವರ ಮನೆ ಬಾಗಿಲಿಗೆ ಅಲೆದು ಅಲೆದು ಕಾಯುತ್ತ, ಮುಂದಿನ ಚುನಾವಣೆಯಲ್ಲಿ ನೀಡುವ ಪೊಳ್ಳು ಭರವಸೆಗೆ ಸಿದ್ಧನಾಗಿ ಬಿಡುತ್ತಾನೆ. ಇಂತದ್ದೆ ಒಂದು ಕಥೆ ಬಾಳೆಹೊನ್ನೂರು ಸಮೀಪದ ಮಣಬೂರು ಗ್ರಾಮಸ್ಥರದ್ದಾಗಿದೆ.

ಬಾಳೆಹೊನ್ನೂರು ಸಮೀಪದ ಮಣಬೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ರಸ್ತೆ ಮಟ್ಟದಲ್ಲಿ ಸೇತುವೆ ನಿರ್ಮಿಸಿದ್ದು, ಮಲೆನಾಡಿನಲ್ಲಿ ಸರಾಸರಿ ಬಿಳುವ ಮಳೆ ಯಾವಾಗಲು ಹೆಚ್ಚೆ ಇರುತ್ತದೆ. ಈ ವೇಳೆ ಉಕ್ಕಿ ಹರಿಯುವ ನದಿಗಳಿಂದ ಗ್ರಾಮಗಳ ಸಂಪರ್ಕಕ್ಕೆ ಕಟ್ಟಿರುವ ಕಿರು ಸೇತುವೆಗಳ ಮೇಲೆ ನೀರು ಹರಿಯುವುದರಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಿ ಗ್ರಾಮಕ್ಕೆ ಹಾಗು ಗ್ರಾಮದ ಜನರಿಗೆ ಜಲದಿಗ್ಬಂದನ ಹಾಕಿದಂತೆ ಆಗಿದೆ. ಮಣಬೂರಿನಿಂದ ಬಾಳೆಹೊನ್ನೂರಿಗೆ ಗ್ರಾಮಸ್ಥರು ಹೋಗಬೇಕಾದರೆ ನದಿಯ ಒಂದು ಬದಿಯಿಂದ ಮತ್ತೊಂದು ಬದಿಗೆ ಹಗ್ಗ ಕಟ್ಟಿ, ‘ಹಗ್ಗದ ಮೇಲಿನ ನಡಿಗೆಯಂತೆ’, ತುಂಬಿ ಹರಿಯುವ ನದಿಯಲ್ಲಿ ಜೀವದಂತ್ತಿರುವ ಹಗ್ಗವನ್ನು ಕೈಯಲ್ಲಿ ಹಿಡಿದು, ಹರಸಾಹಸ ಪಟ್ಟು ಹೋಗಬೇಕಾಗಿದೆ. ಇದು ಇಂದು ನಿನ್ನೆಯದಲ್ಲ, ದಶಕಗಳಿಗೂ ಹೆಚ್ಚು ಕಾಲದ ಸ್ಥಳೀಯ ಗ್ರಾಮಸ್ಥರ ಸಮಸ್ಯೆಯಗಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೆಚ್ಚಿನ ಅನಾಹುತಾ ಆಗುವ ಮುನ್ನ ಎಚ್ಚೆತ್ತು ಸಮಸ್ಯೆ ಬಗೆ ಹರಿಸಬೇಕೆನ್ನುವುದು ಗ್ರಾಮಸ್ಥರ ಒತ್ತಾಯವಾಗಿದೆ.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!