ಶಾಲಾ ಕಟ್ಟಡದ ನಿರ್ಮಾಣಕ್ಕೆ ಗ್ರಾಮಸ್ಥರ ಒತ್ತಾಯ
1 min readಚಿಕ್ಕಮಗಳೂರು : ಮಳೆ ನಿಂತರು ಮಳೆ ಹನಿ ನಿಲ್ಲದು ಎಂಬ ನಾಣ್ಣುಡಿಯಂತೆ ಜಿಲ್ಲೆಯಲ್ಲಿ ಸುರಿದ ಸತತ ಮಳೆಯಿಂದಾಗಿ, ಮಳೆ ಬಿಡುವು ಕೊಟ್ಟು 2-3 ದಿನಗಳು ಕಳೆದರು ಸತತ ಮಳೆಯಿಂದಾಗಿ ಶಾಲೆಯ ಗೋಡೆಯು ಸಂಪೂರ್ಣ ಕುಸಿದು ಬಿದ್ದು, ಸ್ವಲ್ಪದರಲ್ಲೇ ಭಾರಿ ಗಂಡಾಂತರ ತಪ್ಪಿದೆ.
ಚಿಕ್ಕಮಗಳೂರು ತಾಲೂಕಿನ ಲಕ್ಯಾ ಹೋಬಳಿಯ ಲಕ್ಯಾ ಗ್ರಾಮದಲ್ಲಿದ್ದ ಸರ್ಕಾರಿ ಶಾಲೆಯ ಗೋಡೆಯು ಸಂಪೂರ್ಣ ಕುಸಿದು ಬಿದಿದ್ದು, ಅಪಾಯವನ್ನು ಆಹ್ವಾನಿಸುವಂತಿದೆ. ನಗರದಿಂದ ಕೂಗಳತೆ ದೂರದಲ್ಲಿದ್ದರು ಲಕ್ಯಾ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಸ್ಥಿತಿ ಈಗಾದರೇ ಇನ್ನೂ ಕುಗ್ರಾಮಗಳಲ್ಲಿರುವ ಸರ್ಕಾರಿ ಶಾಲೆಗಳ ಸ್ಥಿತಿ ಆ ದೇವರಿಗೆ ಪ್ರೀತಿಯಾಗಬೇಕು. ಉಚಿತ ಭಾಗ್ಯಗಳಿಗೆ ಸಾವಿರಾರು ಕೋಟಿ ವೆಚ್ಚ ಮಾಡುವು, ಕಳಪೆ ಕಾಮಗಾರಿಗಳನ್ನು ಮಾಡಿ ಕೋಟಿಗಟ್ಟಲೇ ಹಣವನ್ನು ನೀರಿನಂತೆ ದುಂದುವೆಚ್ಚ ಮಾಡುವ ಸರ್ಕಾರಗಳು ಹಾಗೂ ಜನಪ್ರತಿನಿಧಿಗಳು ಮಕ್ಕಳ ಮುಂದಿನ ಭವಿಷ್ಯಕ್ಕೆ ಬೆಳಕು ನೀಡುವ ವಿದ್ಯೆಯ ಬಗ್ಗೆ ಜ್ಞಾನ ದೇಗುಲದ ಬಗ್ಗೆ ಏಕಿಷ್ಟು ಉಪೇಕ್ಷೆಯೋ ತಿಳಿಯದು. ಇನ್ನಾದರೂ ಜಿಲ್ಲಾಡಳಿತ ಹಾಗು ಸಂಬಂಧಿಸಿದ ಶಿಕ್ಷಣ ಇಲಾಖೆ ವಿದ್ಯೆ ಹರಸಿ ಬರುವ ಗ್ರಾಮಾಂತರ ಭಾಗದ ಬಡ ಪುಟ್ಟ ಕಂದಮ್ಮಗಳಿಗೆ ಸುಸಜ್ಜಿತ ಶಾಲೆ ಕಟ್ಟಡ ಕಲ್ಪಿಸುವಂತಾಗಲಿ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g