ವಾಹನ ಸವಾರರು ಚಲನಚಿತ್ರದ ಭಿತ್ತಿಪತ್ರ ನೋಡ್ಕಂಡು ಅಪಘಾತ : ವರಸಿದ್ಧಿ ವೇಣುಗೊಪಾಲ್
1 min readನಗರದ ಸಾರ್ವಜನಿಕ ಸ್ಥಳಗಳಲ್ಲಿ ಚಲನಚಿತ್ರ ಮಂದಿರದ ಮಾಲೀಕರು ಭಿತ್ತಿ ಪತ್ರಗಳನ್ನು ಹಾಕಿರುವುದರಿಂದ ವಾಹನ ಸವಾರರುಅದನ್ನು ವೀಕ್ಷಿಸುತ್ತಿರುವುದರಿಂದಾಗಿ ಅಪಘಾತಗಳು ಸಂಭವಿಸುತ್ತಿವೆಎಂದು ನಗರಸಭೆಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ತಿಳಿಸಿದರು.ಅವರುಇಂದು ನಗರಸಭೆ ವತಿಯಿಂದ ನಗರದ ಸಾರ್ವಜನಿಕ ಸ್ಥಳದಲ್ಲಿ ಹಾಕಲಾಗಿದ್ದ ಚಲನಚಿತ್ರದ ಭಿತ್ತಿಪತ್ರಗಳನ್ನು ತೆರವುಗಳಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ನಗರದ ಸ್ವಚ್ಚತೆಗೆಆದ್ಯತೆ ನೀಡಬೇಕಿರುವಚಿತ್ರಮಂದಿರದವರು ನಿರ್ಲಕ್ಷ್ಯ ವಹಿಸುತ್ತಿದ್ದು, ಈ ಬಗ್ಗೆ ನಿಗಧಿತ ಸ್ಥಳದಲ್ಲೇ ಭಿತ್ತಿ ಪತ್ರಗಳನ್ನು ಹಾಕುವಂತೆ ಸೂಚಿಸಿ ಎಲ್ಲಾ ಚಿತ್ರಮಂದಿರಗಳ ಮಾಲೀಕರಿಗೆ ನಗರಸಭೆಯಿಂದ ಸೂಚನೆ (Notice) ಪತ್ರವನ್ನು ನೀಡುವುದಾಗಿ ಎಚ್ಚರಿಸಿದರು.ನಗರವನ್ನು ಸುಂದರ ನಗರವನ್ನಾಗಿಸಲು ನಿರ್ಧಾರ ಮಾಡಿದ್ದುಅದರ ಪೂರಕವಾಗಿಇದುಒಂದು ಭಾಗವಾಗಿದ್ದು, ವಿದ್ಯುತ್ ಕಂಬಗಳ ಮೇಲೆ, ಅಂಗಡಿರೋಲಿಂಗ್ ಶೆಟರ್ ಮೇಲೆ ಖಾಸಗಿ ಮನೆ ಗೋಡೆಗಳ ಮೇಲೆ ಭಿತ್ತಿಪತ್ರಅಂಟಿಸುತ್ತಿರುವುದರಿಂದಚಿತ್ರಮಂದಿರ ಮಾಲೀಕರ ವಿರುದ್ದದೂರು ದಾಖಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ನಗರಸಭೆ ವತಿಯಿಂದ ಪ್ರತ್ಯೇಕಜಾಹಿರಾತು ಫಲಕಗಳನ್ನು ನಿರ್ಮಿಸಿದ್ದು ಸೂಕ್ತವಾದ ಸ್ಥಳದಲ್ಲಿಯೇ ಹಾಕಬೇಕು ಎಂದು ಮನವಿ ಮಾಡಿದಅವರು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಲು ವಿನಂತಿಸಿದರು.ಕೆಲವು ಖಾಸಗಿ ಶಾಲೆಗಳು ಮತ್ತು ಸಂಘಸಂಸ್ಥೆಗಳು ಬ್ಯಾನರ್ ಬಂಟಿಂಗ್ಸ್ಗಳನ್ನು ಎಲ್ಲೆಂದರಲ್ಲಿ ಹಾಕುತ್ತಿರುವುದರಿಂದ ನಗರದಅಂದಕೆಟ್ಟು ಹೋಗುತ್ತಿದೆ ಈ ಬಗ್ಗೆ ನಗರಸಭೆಅನುಮತಿ ಪಡೆದು ಸೂಕ್ತ ಜಾಗದಲ್ಲಿ ಹಾಕುವಂತೆಕೋರಿದರು.ಇದನ್ನು ಮೀರಿ ಕಾನೂನು ಉಲ್ಲಂಘಿಸುವವರ ವಿರುದ್ದವೂ ಕಾನೂನು ಕ್ರಮ ಕೈಗೊಳ್ಳಲು ಹಿಂಜರಿಯವುದಿಲ್ಲ ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ನಗರಸಭೆ ಸಿಬ್ಬಂದಿಗಳಾದ ಅಣ್ಣಯ್ಯ, ಈಶ್ವರ್, ಸುನಿಲ್, ಶ್ರೀನಿವಾಸ್, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g