ವಿಶ್ವ ರಂಗ ಭೂಮಿ ದಿನದ ಅಂಗವಾಗಿ ಮಾರ್ಚ್ 27 ರಂದು ಕುವೆಂಪು ಕಲಾ ಮಂದಿರದಲ್ಲಿ ನಾಟಕ ಪ್ರದರ್ಶನ
1 min readಚಿಕ್ಕಮಗಳೂರು : ಅಭಿನಯ ದರ್ಪಣ ಹಾಗೂ ರಂಗಶಂಕರ ಇವರುಗಳ ಸಹಕಾರದಿಂದ ವಿಶ್ವ ರಂಗ ಭೂಮಿ ದಿನಾಚರಣೆ ಅಂಗವಾಗಿ ಮಾರ್ಚ್ 27 ರಂದು ನಗರದ ಕುವೆಂಪು ಕಲಾ ಮಂದಿರದಲ್ಲಿ ಸಂಜೆ 6 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ನಾಟಕ ಅಕಾಡೆಮಿ ಸದಸ್ಯರಾದ ನಾಗರಾಜ್ ರಾವ್ ಕಲ್ಕಟ್ಟೆ ಹೇಳಿದ್ರು. ಅವರು ಇಂದು ಮಾತನಾಡುತ್ತ ವಿಶ್ವ ರಂಗ ಭೂಮಿ ದಿನಾಚರಣೆಯನ್ನು ಮಾರ್ಚ್ 27 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ರಂಗಚಟುವಟಿಕೆಗಳು ನಿರಂತರವಾಗಿರಬೇಕು. ಅದರ ಮಹತ್ವವನ್ನು ಒಂದು ದಿನವಾದರೂ ಜನರಿಗೆ ತಿಳಿಸುವ ಕೆಲಸ ಮಾಡಬೇಕೆಂದು ಕುವೆಂಪು ಕಲಾಮಂದಿರದಲ್ಲಿ ಮಳ್ಳಗಿಂಪೆಲ್ ನಾಟಕ ನಡೆಯಲಿದೆ. ಈ ನಾಟಕವನ್ನು ವಿನೀತ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಇದೇ ವೇಳೆ ರವೀಂದ್ರ ಬೆಳವಾಡಿ, ಪಿ.ರಾಜೇಶ್, ವೀಕ್ಷಿತ್, ರಂಜಿತ್ ಸೇರಿದಂತೆ ನಾಲ್ಕು ಜನ ರಂಗಕರ್ಮಿಗಳಿಗೆ ಸನ್ಮಾನ ನಡೆಸಲಾಗುವುದು ಎಂದು ಹೇಳಿದ್ರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g