ಸರ್ಕಾರ ಹೆಣದ ಮೇಲೂ ಹಣ ವಸೂಲಿ ಮಾಡ್ತಿದೆ_ಡಿ.ಕೆ ಶಿವಕುಮಾರ್
1 min read
ಚಿಕ್ಕಮಗಳೂರು: ಇಡೀ ದೇಶದಲ್ಲಿ ಅತಿ ಭ್ರಷ್ಟ ಸರ್ಕಾರ ಅಂದ್ರೆ ಕರ್ನಾಟಕ ಸರ್ಕಾರ. ಈ ಸರ್ಕಾರ ಹೆಣದ ಮೇಲೆ ಹಣ ವಸೂಲಿ ಮಾಡ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ನಗರ ಸಮೀಪದ ಸೆರಾಯ್ ಹೊಟೇಲ್ ನಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಆಸ್ಪತ್ರೆ ಸೇರಿದಂತೆ ಸತ್ತವರಿಗೆ ಸರ್ಟಿಫಿಕೇಟ್ ನೀಡಲು ಸಹ ಬಿಜೆಪಿ ನಾಯಕರು ಹಣ ಕೇಳುತ್ತಿದ್ದಾರೆ ಎಂದು ಆರೋಪಿಸಿದರು. ಅತಿವೃಷ್ಟಿ, ಅಕಾಲಿಕ ಮಳೆಯಿಂದ ಕೃಷಿಕರು, ಕಾಫಿ ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದು ಈ ಸಮಸ್ಯೆ ಬಗ್ಗೆ ಯಾರು ಮಾತಾಡುತ್ತಿಲ್ಲ. ಶೋಭಾ ಕರಂದ್ಲಾಜೆ, ಸಿ.ಟಿ ರವಿ ಚಿಕ್ಕಮಗಳೂರು ರೈತರ ಸಮಸ್ಯೆ ಬಗ್ಗೆ ಈ ವರೆಗೂ ಯಾರೂ ಕೂಡ ಮಾತಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ನಮ್ಮ ರೈತರನ್ನ ಖಲೀಸ್ತಾನದವರು ಅಂತೆಲ್ಲಾ ಕರೆದಿರುವ ರೈತ ಸಮೂಹ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g