ಧಾರಕಾರ ಮಳೆಯಿಂದ ಬಾರ್ ಆಂಡ್ ರೆಸ್ಟೋರೆಂಟ್ಗೆ ನುಗ್ಗಿದ ಜಿಂಕೆ
1 min readಚಿಕ್ಕಮಗಳೂರು : ಕಳಸ ಪಟ್ಟಣದಲ್ಲಿ ಧಾರಕಾರವಾಗಿ ಮಳೆಯಾಗುತ್ತಿರುವ ಹಿನ್ನೆಲೆ ಕಾಡಿನಲ್ಲಿ ಇರುವ ಜಿಂಕೆ ಬಾರ್ ಆಂಡ್ ರೆಸ್ಟೋರೆಂಟ್ಗೆ ನುಗ್ಗಿ ಕ್ಷಣ ಕಾಲ ಸ್ಥಳೀಯರಲ್ಲಿ ಭಯ ಮಿಶ್ರಿತ ಆಶ್ಚರ್ಯಕ್ಕೆ ಕಾರಣವಾಗಿದೆ.
ಚಿಕ್ಕಮಗಳೂರು ಜಿಲ್ಲೆ ಕಳಸದಲ್ಲಿ ಧಾರಕಾರವಾಗಿ ಮಳೆಯಾಗುತ್ತಿರುವ ಹಿನ್ನೆಲೆ ಕಳಸ ಪಟ್ಟಣದಲ್ಲಿರುವ ಆಶೀರ್ವಾದ್ ರೆಸ್ಟೋರೆಂಟಿಗೆ ನಾಡಿಗೆ ಬಂದ ಜಿಂಕೆಯೊಂದು ಗಾಬರಿಗೊಂಡು ಏಕಾಏಕಿ ನುಗ್ಗಿದೆ. ತಕ್ಷಣ ರೆಸ್ಟೋರೆಂಟ್ ಮಾಲೀಕ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಜಿಂಕೆಯನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g