May 18, 2024

MALNAD TV

HEART OF COFFEE CITY

ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಬಸ್ : ಚಾಲಕನ ಡೋರ್ ನಿಂದ ಇಳಿದ ಪ್ರಯಾಣಿಕರು

1 min read

 

ಮಲೆನಾಡಲ್ಲಿ ಗಾಳಿ ಮಳೆ ಮುಂದುವರಿದಿದೆ ಪರಿಣಾಮ
ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಸರ್ಕಾರಿ ಬಸ್ ಕುಸಿದ ಘಟನೆ ನಡೆದಿದೆ.

ಮೂಡಿಗೆರೆ ತಾಲೂಕಿನ ಗುತ್ತಿಹಳ್ಳಿ ಗ್ರಾಮದಲ್ಲಿ ಈ ಘಟನೆ ಇಂದು ಮಧ್ಯಾಹ್ನ ನಡೆದಿದ್ದು ರಸ್ತೆ ಬದಿಯ ದಿಣ್ಣೆಗೆ ಒರಗಿ ಬಸ್ಸಿ ಅರ್ಧಭಾಗ ವಾಲಿದೆ ಪರಿಣಾಮ ಪ್ರಯಾಣಿಕರು ಬಸ್ಸಿನಲ್ಲೇ ಸಿಲುಕುವಂತಾಗಿದೆ, ಬಸ್ ನ ಮುಖ್ಯ ಡೋರ್ ತೆಗೆಯಲು ಸಾಧ್ಯವಾಗದೆ ಯಾರು ಇಳಿಯಲು ಆಗದೆ ಪರದಾಡುವಂತಾಗಿತ್ತು, ನಂತರ ಕೆಲಕಾಲ ಎಲ್ಲರೂ ಬಸ್ಸಿನಲ್ಲೇ ಸಿಲುಕಬೇಕಾಯಿತು ಕಡೆಗೆ
ಡ್ರೈವರ್ ಸೀಟಿನಿಂದ ಎಲ್ಲಾ ಪ್ರಯಾಣಿಕರು ಇಳಿಯಬೇಕಾಯಿತು
ಬಸ್ಸಿನಲ್ಲಿದ್ದ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಚಾಲಕನ ಡೋರ್ ನಿಂದಲೇ ಇಳಿದರು ,
ಇಂದು ಬೆಳಿಗ್ಗೆ ಗುತ್ತಿಹಳ್ಳಿಯಿಂದ ಹೊರಟ ಬಸ್ಸು ಬೆಟ್ಟಗೆರೆ ಮೂಲಕ ಮೂಡಿಗೆರೆಗೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿತ್ತು, ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ, ಮೂಡಿಗೆರೆ ತಾಲೂಕಿನ ಹಲವೆಡೆ ಮಳೆ ಇನ್ನೂ ತಗ್ಗಿಲ್ಲವಾದ್ದರಿಂದ ರಸ್ತೆಯು ಹದಗೆಟ್ಟಿದ್ದು ವಾಹನ ಸಂಚಾರ ದುಸ್ತರವಾಗಿದೆ, ಪ್ರಯಾಣಿಕರು ಲೋಕೋಪಯೋಗಿ ಇಲಾಖೆಯ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!