ಬೇಟೆಯಾಡಿದ ಹುಳದ ಕಣ್ಣನ್ನ ತಿಂದ ಬಳಿಕ ದೇಹವನ್ನ ತಿಂದ ಕೀಟ
1 min readಬೇಟೆಯಾಡಿದ ಕೀಟದ ಕಣ್ಣನ್ನ ತಿಂದು ನಂತರ ದೇಹವನ್ನ ತಿಂದ ಸೂರ್ಯಕುದುರೆ ಹುಳದ ಬೇಟೆಯ ದೃಶ್ಯಯವನ್ನ ಜಿಲ್ಲೆಯ ಶೃಂಗೇರಿ ತಾಲೂಕಿನ ಕೆರೆಕಟ್ಟೆ ಗ್ರಾಮದ ಭರತ್ ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಸಂಪೂರ್ಣವಾಗಿ ಹಸಿರು ಬಣ್ಣದಿಂದ ಕೂಡಿರುವ ಸೂರ್ಯಕುದುರೆ ಹುಳು ಎಲೆಗಳ ಮರೆಯಲ್ಲಿ ಬೇಟೆಗಾಗಿ ಕಾದಿಕೂತಿರುತ್ತದೆ. ಹಸಿರು ಬಣ್ಣವಿರೋ ಕಾರಣ ಇತರೇ ಕೀಟಗಳಿಗೂ ಗೊತ್ತಾಗುವುದಿಲ್ಲ. ಬೇಟೆಯಾಡಿದ ಕೂಡಲೇ ಆ ಕೀಟದ ಕಣ್ಣನ್ನ ಮೊದಲು ತಿಂದು ನಂತರ ದೇಹವನ್ನ ತಿನ್ನುತ್ತದೆ. ಸೂರ್ಯ ಕುದುರೆ ಹುಳು ಕೀಟದ ಕಣ್ಣನ್ನೇ ತಿನ್ನುವ ದೃಶ್ಯವನ್ನೂ ಭರತ್ ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಈ ಕೀಟವನ್ನ ಮಲೆನಾಡಲ್ಲಿ ಮಳೆಗಾಲದ ಕೂಗುವ ಸಿಕಡಾ ಎಂದು ಕರೆಯುತ್ತಾರೆ. ಕೆಲವೆಡೆ ಸೂರ್ಯಕುದುರೆ ಎಂದೂ ಕರೆಯುತ್ತಾರೆ. ಮತ್ತಲವೆಡೆ ಕುದುರೆ ಹುಳ ಎಂದೂ ಕರೆಯುತ್ತಾರೆ. ಸೂರ್ಯಕುದುರೆ ಬೇಟೆಯಾಡಿ ಬಳಿಕ ಬೇರೆಡೆ ಹೋಗಿ ತಿನ್ನುವುದು ಸರ್ವೇ ಸಾಮಾನ್ಯ. ಆದರೆ, ಇಲ್ಲಿ ಬೇಟೆಯಾಡಿದ ಜಾಗದಲ್ಲೇ ತಿನ್ನುತ್ತಿರುವುದರಿಂದ ಆ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಸೂರ್ಯಕುದರೆ ಹಿಡಿತಕ್ಕೆ ಸಿಕ್ಕಿ ಕೀಟ ತಪ್ಪಿಸಿಕೊಳ್ಳಲು ಹೋರಾಟ ನಡೆಸಿದರೂ ಸಾಧ್ಯವಾಗಿಲ್ಲ. ತಪ್ಪಿಸಿಕೊಳ್ಳಲು ಹೋರಾಡಿದ ಕೀಟ ಕೊನೆಗೆ ಕೈಚೆಲ್ಲಿ ಸೂರ್ಯಕುದುರೆ ಕಣ್ಣನ್ನ ತಿನ್ನುತ್ತಿದ್ದಂತೆ ಸೋಲೊಪ್ಪಿಕೊಂಡಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g