ಉಪವಿಭಾಗ ಅಧಿಕಾರಿ ವರ್ಗಾವಣೆ ರದ್ದು
1 min readಉಪವಿಭಾಗ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಹೆಚ್. ಎಲ್. ನಾಗರಾಜ್ ರವರ ವರ್ಗಾವಣೆಯನ್ನು ರದ್ದು ಮಾಡಲಾಗಿದೆ.
ಡಾ. ಹೆಚ್. ಎಲ್. ನಾಗರಾಜ್ ಅವರಿಗೆ ಬಡ್ತಿ ನೀಡಿ ಮಂಗಳೂರು ಅಪರಾ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿತ್ತು ಡಾ.ಹೆಚ್. ಎಲ್. ನಾಗರಾಜ ಕಂದಾಯ ಜಮೀನು ಬಾಕಿ ಪ್ರಕಾರಗಳನ್ನು ಶೀಘ್ರ ಇತ್ಯರ್ಥ ಪಡಿಸುವ ಮೂಲಕ ಜನಮನ್ನಣೆಗಳಿಸಿದ್ದಾರೆ ಅವರು ಮಿಷನ್ ಚಿಕ್ಕಮಗಳೂರು ಎನ್ನುವ ತಂಡವನ್ನು ರಚಿಸುವ ಮೂಲಕ ಕೆರೆಗಳ ಒತ್ತುವರಿ ತೆರವುಗೊಳಿಸಿ ಜಲಮೂಲಗಳ ಸಂರಕ್ಷಣೆ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದರು.
ಇನ್ನು ಕಾನೂನುಬಾಹಿರ ನಡೆಯುತ್ತಿದ್ದ ಕೆಲ ಅಕ್ರಮ-ಸಕ್ರಮ ಪ್ರಕರಣಗಳನ್ನು ರದ್ದು ಮಾಡಿದ್ದರು ಅವರನ್ನು ಇಲ್ಲಿಯೇ ಉಳಿಸಿಕೊಳ್ಳಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು. ನಾಗರಾಜ್ ಬಡ್ತಿ ಸಿಕ್ಕಿರುವ ಸಂತಸ ವ್ಯಕ್ತವಾದರೂ ಅವರು ಜಿಲ್ಲೆಯಿಂದ ವರ್ಗಾವಣೆ ಆಗಿರುವುದು ಸರಿಯಲ್ಲ ಎಂದು ಬಹಳಷ್ಟು ಜನರು ಬೇಸರ ವ್ಯಕ್ತಪಡಿಸಿದರು ಆದರೆ ಈಗ ಅವರ ವರ್ಗಾವಣೆಯನ್ನು ಸರ್ಕಾರ ತಡೆಹಿಡಿದಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g