April 29, 2024

MALNAD TV

HEART OF COFFEE CITY

ಬಾರ್’ನಲ್ಲಿ ಗಲಾಟೆ, ಗೂಡ್ಸ್ ಮಾಲೀಕನಿಂದ ವಸೂಲಿ ಇಬ್ಬರು ಪೊಲೀಸರು ಅಮಾನತು

1 min read

ಚಿಕ್ಕಮಗಳೂರು: ಬಾರ್’ನಲ್ಲಿ ಬಿಯರ್ ಬಾಟಲಿ ಹೊಡೆದ ಒಬ್ಬ, ಗೂಡ್ಸ್ ಗಾಡಿಯವನಿಂದ ಹಣ ವಸೂಲಿ ಮಾಡಿದ ಮತ್ತೊಬ್ಬ ಈ ಇಬ್ಬರು ಕೊಪ್ಪ ಠಾಣೆಯ ಪೊಲೀಸರನ್ನು ಅಮಾನತ್ತುಮಾಡಲಾಗಿದೆ.

ಈಗಾಗಲೇ ಅಮಾನತ್ತಾಗಿಯೇ ತರೀಕೆರೆಯಿಂದ ಕೊಪ್ಪ ಠಾಣೆಗೆ ವರ್ಗಾವಣೆಯಾಗಿದ್ದ ಇಬ್ಬರು ಪೊಲೀಸರು ಮತ್ತೆ ತಮ್ಮ ವರಸೆ ತೋರಿಸಿ ಅಮಾನತ್ತಾಗಿದ್ದಾರೆ. ಮುಖ್ಯಪೇದೆ ಎಚ್.ಟಿ ಉಮಾಶಂಕರ್ ಪಟ್ಟಣದ ಬಾರೊಂದರಲ್ಲಿ ಕುಡಿದು ಹಣಕಾಸಿನ ವಿಷಯಕ್ಕೆ ವ್ಯಕ್ತಿಯೊಬ್ಬನ ಜೊತೆ ಗಲಾಟೆ ಮಾಡಿಕೊಂಡು ಬಿಯರ್ ಬಾಟಲ್ ಹೊಡೆದ ಕಾರಣಕ್ಕೆ ಅಮಾನತು ಶಿಕ್ಷೆಗೆ ಗುರಿಯಾಗಿದ್ದರೆ, ಮತ್ತೊರ್ವ ಪೇದೆ ಬಿ.ಸಿದ್ದೇಶ್ ಗೂಡ್ಸ್ ಗಾಡಿಯೊಂದನ್ನು ಅಡ್ಡಗಟ್ಟಿ ಅದರ ಮಾಲೀಕನಿಂದ ಬರೋಬ್ಬರಿ ಒಂದೂವರೆ ಲಕ್ಷ ಲಂಚದ ಜೊತೆಗೆ ಮದ್ಯಪಾನವನ್ನ ವಸೂಲಿ ಮಾಡಿದ ಕಾರಣಕ್ಕಾಗಿ ಸೇವೆಯಿಂದ ಸಸ್ಪೆಂಡ್ ಆಗಿದ್ದಾನೆ. ಕಳೆದ ಎಂಟು ತಿಂಗಳ ಹಿಂದಷ್ಟೇ ತರೀಕೆರೆ ತಾಲೂಕಿನಲ್ಲಿ ಕರ್ತವ್ಯ ಲೋಪ ಆರೋಪದ ಹಿನ್ನೆಲೆ ಅಮಾನತ್ತಾಗಿ ಪನಿಶ್ಮೆಂಟ್ ಟ್ರಾನ್ಸಫರ್ ಆಗಿದ್ದ ಇಬ್ಬರೂ ಇದೀಗ ಮತ್ತೆ ಸೇವೆಯಿಂದ ಸಸ್ಪೆಂಡ್ ಆಗಿದ್ದಾರೆ. ಕೊಪ್ಪ ಡಿವೈಎಸ್.ಪಿ ಅನಿಲ್ ಕುಮಾರ್ ಈ ಆದೇಶ ಹೊರಡಿಸಿದ್ದು ಶಿಸ್ತಿನ ಇಲಾಖೆಯಲ್ಲಿ ಇಂತಹ ಕೆಲಸ ಮಾಡುತ್ತಿದ್ದ ಇಬ್ಬರು ಪೊಲೀಸರಿಗೂ ಕಠಿಣ ಶಿಕ್ಷೆಗೆ ಶಿಫಾರಸ್ಸು ಮಾಡಬೇಕೆಂದು ಕೊಪ್ಪ ನಾಗರೀಕರು ಆಗ್ರಹಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!