May 18, 2024

MALNAD TV

HEART OF COFFEE CITY

ತಂದೆಯ ಮಾತನ್ನ ನಿರ್ಮೋಹಿಯಾಗಿ ಪಾಲಿಸಿದ್ದರಿಂದ ರಾಮ ಆದರ್ಶನಾದ : ಸಿ.ಟಿ.ರವಿ

1 min read

ಚಿಕ್ಕಮಗಳೂರು : ಗಾಂಧಿ ಎಂದು ಹೆಸರಿಟ್ಟುಕೊಂಡವರೆಲ್ಲಾ ಗಾಂಧೀಜಿ ಆಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಹೇಳಿದ್ಧಾರೆ. ಅವರು ಇಂದು ನಗರದ ಕೋರ್ಟ್ ಮುಂಭಾಗ ಗಾಂಧಿ ಪಾರ್ಕಿನಲ್ಲಿ ಆಯೋಜಿಸಿದ್ದ ಗಾಂಧಿ ಪರಿಕಲ್ಪನೆಯ ರಾಮರಾಜ್ಯದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀರಾಮಚಂದ್ರ ತಂದೆಯ ಮಾತನ್ನ ಚಾಚು ತಪ್ಪದೆ ನಿರ್ಮೋಹಿಯಾಗಿ ಪಾಲಿಸಿದ್ದರಿಂದ ಶ್ರೀರಾಮಚಂದ್ರ ಆದರ್ಶವಾಗಿದ್ದಾರೆ ಎಂದರು. ರಾಮ ರಾಜ್ಯ – ಸ್ವರಾಜ್ಯ ಎರಡೂ ಬೇರೆ ಅಲ್ಲ ಎಂದು ಗಾಂಧೀಜಿಯೇ ಹೇಳಿದ್ದಾರೆ. ಸ್ವಾವಲಂಬಿಯಾಗಿರುವ ಸ್ವರಾಜ್ಯ ರಾಮರಾಜ್ಯ ಎಂದು ಗಾಂಧೀಜಿ ಹೇಳಿದ್ದರು ಎಂದು ಹೇಳಿದ್ದಾರೆ. ಮಹಾತ್ಮ ಗಾಂಧಿ ಕೂಡ ರಾಮರಾಜ್ಯದ ಪರಿಕಲ್ಪನೆಯನ್ನ ಹೊಂದಿದ್ದರು. ಸ್ವಾವಲಂಬಿ ಬದುಕೇ ಗಾಂಧೀಜಿಯವರ ರಾಮರಾಜ್ಯದ ಪರಿಕಲ್ಪನೆ ಎಂದರು.

ನಮ್ಮ ವಂಶಕ್ಕೆ ಅಧಿಕಾರ ಇರಬೇಕು ಅನ್ನೋದು ಗಾಂಧಿಯವರ ರಾಮರಾಜ್ಯ ಆಗಲ್ಲ ಎಂದು ಅಧಿಕಾರಕ್ಕೆ ಅಂಟಿಕೊಳ್ಳುವವರಿಗೆ ಮಾತಿನ ಮೂಲಕ ತಿವಿದರು. ಬಳಿಕ ಸಾರ್ವಜನಿಕರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದರು. ಗಾಂಧೀಜಿಯೂ ಜನ, ಜನರ ಭಾವನೆ ಜೋಡಿಸುತ್ತಿದ್ದರು. ಮೋದಿ ಕೂಡ ತಿರಂಗಾ ಹಾರಿಸೋದು, ಜಾಗಟೆ ಭಾರಿಸುವ ಮೂಲಕ ಜನರ ಭಾವನೆಯನ್ನ ಜೋಡಿಸುತ್ತಿದ್ದಾರೆ ಎಂದರು. ನಾಗರೀಕರ ಮಧ್ಯೆ ನೈತಿಕತೆ ಇರಬೇಕು. ಸತ್ಯ ಇರುವ ಕಡೆ ಸುಳ್ಳಿಗೆ ಜಾಗ ಇರೋದಿಲ್ಲ. ಇದು ಸಮಾಜದಲ್ಲಿ ಪ್ರತಿಷ್ಠಾಪನೆ ಆಗಬೇಕಿದೆ. ಇಂದಿನ ಭ್ರಷ್ಟಾಚಾರ ವ್ಯವಸ್ಥೆಯಲ್ಲಿ ರಾಮರಾಜ್ಯ ಸಾಧ್ಯವಾ ಎಂಬ ಪ್ರಶ್ನೆಗೆ ಅಸಾಧ್ಯ ಅಲ್ಲ, ಕಷ್ಟಸಾಧ್ಯ ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!